<p>ಸರ್ಕಾರ ರೈತರಿಗಾಗಿ ರೂಪಿಸಿದ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ (KVP) ಒಂದಾಗಿದೆ. 1988ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ರೈತರಿಗಾಗಿಯೇ ರೂಪಿಸಲಾಗಿದ್ದ ಈ ಯೋಜನೆಯಲ್ಲಿ ಇಂದು ಎಲ್ಲರೂ ಹೂಡಿಕೆ ಮಾಡಬಹುದು. ಇದು 113(9 ವರ್ಷ 5 ತಿಂಗಳು) ತಿಂಗಳ ಪೂರ್ವನಿಗದಿತ ಯೋಜನೆಯಾಗಿದ್ದು, ಹೂಡಿಕೆಗೆ ವಾರ್ಷಿಕವಾಗಿ ಶೇ 7.5 ರಷ್ಟು ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯನ್ನು ಇಂದಿರಾ ವಿಕಾಸ್ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರ ಎಂತಲೂ ಕರೆಯಲಾಗುತ್ತದೆ. </p><p>ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇಡಬಹುದಾದ ಠೇವಣಿ, ಹಣ ಹಿಂಪಡೆಯಲು ಅನುಸರಿಸಬೇಕಾದ ನಿಯಮಗಳೇನು ಎಂಬ ಮಾಹಿತಿ ಇಲ್ಲಿದೆ. </p><p><strong>ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?</strong> </p><ul><li><p>ಭಾರತದ ನಿವಾಸಿಯಾಗಿರಬೇಕು. </p></li></ul><p><strong>ಠೇವಣಿ ಇಡಬಹುದಾದ ಮೊತ್ತ ಎಷ್ಟು?</strong> </p><ul><li><p>ಖಾತೆಯ ಮಾಲೀಕತ್ವ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತ. </p></li><li><p>ಕನಿಷ್ಠ ₹1000 ಠೇವಣಿಯೊಂದಿಗೆ ಖಾತೆ ತೆರೆಯಬೇಕು. ಖಾತೆಗೆ ₹100ರ ವೃದ್ಧಿಯಲ್ಲಿ ಮಾತ್ರ ಠೇವಣಿ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿಇಲ್ಲ. </p></li></ul><p><strong>ಅವಧಿಪೂರ್ವ ಮುಚ್ಚುವಿಕೆಯ ನಿಯಮಗಳೇನು?</strong></p><ul><li><p>ಖಾತೆದಾರರು ಮರಣ ಹೊಂದಿದರೆ ಖಾತೆಯನ್ನು ಮುಚ್ಚಬಹುದು. </p></li><li><p>ಉಳಿತಾಯ ಖಾತೆಗೆ ಕಾಲಕಾಲಕ್ಕೆ ಅನ್ವಯವಾಗುವ ದರದಲ್ಲಿ ಲೆಕ್ಕಹಾಕಿದ ಅಸಲು ಮೊತ್ತ ಮತ್ತು ಸರಳ ಬಡ್ಡಿಯನ್ನು ಪಾವತಿಸಲಾಗುತ್ತದೆ. </p></li></ul><p><strong>ಖಾತೆ ವರ್ಗಾವಣೆ ಸಾಧ್ಯವೇ?</strong> </p><ul><li><p>ಖಾತೆಯನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಬಹುದು.</p></li><li><p>ವರ್ಗಾವಣೆ ಪಡೆಯುವವರು ಈ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಅರ್ಹರಾಗಿರಬೇಕು. </p></li></ul><p><strong>ಠೇವಣಿ ಹಿಂಪಡೆಯುವುದು ಯಾವಾಗ?</strong></p><ul><li><p>ಯೋಜನೆಯ ಅವಧಿಯು ಮುಕ್ತಾಯವಾದ ಬಳಿಕ ಖಾತೆಯಲ್ಲಿ ಹೂಡಿಕೆ ಮಾಡಿದ ಮೊತ್ತವು ದ್ವಿಗುಣವಾಗುತ್ತದೆ.</p></li><li><p>ಖಾತೆ ತೆರೆಯುವ ಸಮಯದಲ್ಲಿ ಅನ್ವಯವಾಗುವ ಬಡ್ಡಿದರದ ಮೇಲೆ ಠೇವಣಿಯ ಮುಕ್ತಾಯ ಅವಧಿಯನ್ನು ನಿರ್ಧರಿಸಲಾಗುತ್ತದೆ.</p></li></ul><p>ಠೇವಣಿ ಮಾಡಿದ ಪ್ರಮಾಣಪತ್ರದ ಮೇಲೆ ಸಾಲಸೌಲಭ್ಯಗಳನ್ನು ಪಡೆಯಬಹುದಾಗಿದೆ.</p><p><strong>ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರವಿರುವ ಅಂಚೆ ಕಚೇರಿಗೆ ಭೇಟಿ ನೀಡಬಹುದು, ಅಥವಾ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಪಡೆಯಬಹುದು.</strong></p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ಕಾರ ರೈತರಿಗಾಗಿ ರೂಪಿಸಿದ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ (KVP) ಒಂದಾಗಿದೆ. 1988ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ರೈತರಿಗಾಗಿಯೇ ರೂಪಿಸಲಾಗಿದ್ದ ಈ ಯೋಜನೆಯಲ್ಲಿ ಇಂದು ಎಲ್ಲರೂ ಹೂಡಿಕೆ ಮಾಡಬಹುದು. ಇದು 113(9 ವರ್ಷ 5 ತಿಂಗಳು) ತಿಂಗಳ ಪೂರ್ವನಿಗದಿತ ಯೋಜನೆಯಾಗಿದ್ದು, ಹೂಡಿಕೆಗೆ ವಾರ್ಷಿಕವಾಗಿ ಶೇ 7.5 ರಷ್ಟು ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯನ್ನು ಇಂದಿರಾ ವಿಕಾಸ್ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರ ಎಂತಲೂ ಕರೆಯಲಾಗುತ್ತದೆ. </p><p>ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇಡಬಹುದಾದ ಠೇವಣಿ, ಹಣ ಹಿಂಪಡೆಯಲು ಅನುಸರಿಸಬೇಕಾದ ನಿಯಮಗಳೇನು ಎಂಬ ಮಾಹಿತಿ ಇಲ್ಲಿದೆ. </p><p><strong>ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?</strong> </p><ul><li><p>ಭಾರತದ ನಿವಾಸಿಯಾಗಿರಬೇಕು. </p></li></ul><p><strong>ಠೇವಣಿ ಇಡಬಹುದಾದ ಮೊತ್ತ ಎಷ್ಟು?</strong> </p><ul><li><p>ಖಾತೆಯ ಮಾಲೀಕತ್ವ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತ. </p></li><li><p>ಕನಿಷ್ಠ ₹1000 ಠೇವಣಿಯೊಂದಿಗೆ ಖಾತೆ ತೆರೆಯಬೇಕು. ಖಾತೆಗೆ ₹100ರ ವೃದ್ಧಿಯಲ್ಲಿ ಮಾತ್ರ ಠೇವಣಿ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿಇಲ್ಲ. </p></li></ul><p><strong>ಅವಧಿಪೂರ್ವ ಮುಚ್ಚುವಿಕೆಯ ನಿಯಮಗಳೇನು?</strong></p><ul><li><p>ಖಾತೆದಾರರು ಮರಣ ಹೊಂದಿದರೆ ಖಾತೆಯನ್ನು ಮುಚ್ಚಬಹುದು. </p></li><li><p>ಉಳಿತಾಯ ಖಾತೆಗೆ ಕಾಲಕಾಲಕ್ಕೆ ಅನ್ವಯವಾಗುವ ದರದಲ್ಲಿ ಲೆಕ್ಕಹಾಕಿದ ಅಸಲು ಮೊತ್ತ ಮತ್ತು ಸರಳ ಬಡ್ಡಿಯನ್ನು ಪಾವತಿಸಲಾಗುತ್ತದೆ. </p></li></ul><p><strong>ಖಾತೆ ವರ್ಗಾವಣೆ ಸಾಧ್ಯವೇ?</strong> </p><ul><li><p>ಖಾತೆಯನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಬಹುದು.</p></li><li><p>ವರ್ಗಾವಣೆ ಪಡೆಯುವವರು ಈ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಅರ್ಹರಾಗಿರಬೇಕು. </p></li></ul><p><strong>ಠೇವಣಿ ಹಿಂಪಡೆಯುವುದು ಯಾವಾಗ?</strong></p><ul><li><p>ಯೋಜನೆಯ ಅವಧಿಯು ಮುಕ್ತಾಯವಾದ ಬಳಿಕ ಖಾತೆಯಲ್ಲಿ ಹೂಡಿಕೆ ಮಾಡಿದ ಮೊತ್ತವು ದ್ವಿಗುಣವಾಗುತ್ತದೆ.</p></li><li><p>ಖಾತೆ ತೆರೆಯುವ ಸಮಯದಲ್ಲಿ ಅನ್ವಯವಾಗುವ ಬಡ್ಡಿದರದ ಮೇಲೆ ಠೇವಣಿಯ ಮುಕ್ತಾಯ ಅವಧಿಯನ್ನು ನಿರ್ಧರಿಸಲಾಗುತ್ತದೆ.</p></li></ul><p>ಠೇವಣಿ ಮಾಡಿದ ಪ್ರಮಾಣಪತ್ರದ ಮೇಲೆ ಸಾಲಸೌಲಭ್ಯಗಳನ್ನು ಪಡೆಯಬಹುದಾಗಿದೆ.</p><p><strong>ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರವಿರುವ ಅಂಚೆ ಕಚೇರಿಗೆ ಭೇಟಿ ನೀಡಬಹುದು, ಅಥವಾ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಪಡೆಯಬಹುದು.</strong></p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>