'ಗಾಯಗೊಂಡಿರುವ ಶ್ರೇಯಸ್ ಚೇತರಿಸಿಕೊಳ್ಳುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ತಂಡ ಮುನ್ನಡೆಸಲಿದ್ದಾರೆ. ಅಯ್ಯರ್ ಚೇತರಿಸಿಕೊಂಡು, ಟೂರ್ನಿಯ ಕೆಲವು ಪಂದ್ಯಗಳನ್ನಾದರೂ ಆಡಬಹುದು ಎಂಬ ವಿಶ್ವಾಸದಲ್ಲಿದ್ದೇವೆ. ನಿತೀಶ್ ಅವರು ದೇಶಿ ಕ್ರಿಕೆಟ್ನ ನಿಗದಿತ ಓವರ್ ಮಾದರಿಯಲ್ಲಿ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ಹಾಗೂ ಐಪಿಎಲ್ನಲ್ಲಿ 2018ರಿಂದ ಕೆಕೆಆರ್ ಪರ ಆಡಿದ ಅನುಭವ ಹೊಂದಿರುವುದು ಪುಣ್ಯ. ಅವರು ಉತ್ತಮ ನಿರ್ವಹಣೆ ತೋರಲಿದ್ದಾರೆ' ಎಂದು ಪ್ರಕಟಿಸಿದೆ.