<p>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಹಾಗೂ ನಕ್ಷತ್ರಗಳಿಗೆ ಅನುಸಾರವಾಗಿ ಪ್ರತೀ ರಾಶಿಗೂ ಒಂದೊಂದು ವಿಶೇಷ ರತ್ನಗಳಿವೆ. ರಾಶಿಗೆ ಅನುಗುಣವಾಗಿ ರತ್ನಗಳನ್ನು ಧರಿಸುವುದರಿಂದ ಶುಭಫಲ ಹಾಗೂ ರಾಶಿಯಲ್ಲಿನ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.</p><p>ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ರತ್ನಗಳಲ್ಲಿ ಖನಿಜ ಹಾಗೂ ಜೈವಿಕ ರತ್ನಗಳು ಎಂಬ ಎರಡು ಪ್ರಕಾರಗಳಿವೆ. </p>.ಈ ರತ್ನಗಳನ್ನು ಧರಿಸುವುದರಿಂದ, ರಾಶಿ ದೋಷ ಪರಿಹಾರವಾಗಲಿದೆ.ಧನುರ್ಮಾಸ ಆರಂಭ; ತರಕಾರಿ ಧಾರಣೆ ಕುಸಿತ. <ul><li><p>ಜೈವಿಕ ರತ್ನಗಳು ಎಂದರೆ, ಜೀವಂತವಿರುವ ಜೀವಿಗಳ ಉತ್ಪನ್ನದಿಂದ ತಯಾರಿಸಿದ ರತ್ನಗಳಾಗಿವೆ. <br><strong>ಉದಾಹರಣೆ:</strong> ಮುತ್ತು, ಹವಳ. </p></li><li><p>ಖನಿಜ ರತ್ನಗಳು ಎಂದರೆ, ಭೂಗರ್ಭದಲ್ಲಿ ರಾಸಾಯನಿಕ ಪ್ರಕ್ರಿಯೆಯಿಂದ ನೂರಾರು ವರ್ಷಗಳ ಕಾಲ ಸಿದ್ಧವಾದವುಗಳಾಗಿವೆ. </p></li><li><p><strong>ಉದಾಹರಣೆ:</strong> ಮಾಣಿಕ್ಯ, ಪದ್ಮರಾಗ, ಪಚ್ಚೆ ಹಾಗೂ ನೀಲ ಇತ್ಯಾದಿಗಳು.</p></li></ul><p><strong>ರತ್ನಧಾರಣೆಯ ಮಹತ್ವ:</strong> </p><ul><li><p>ರತ್ನಗಳ ಗುಣ ಧರ್ಮಕ್ಕೆ ಅನುಸಾರವಾಗಿ ರತ್ನ ಧರಿಸುವ ವ್ಯಕ್ತಿಯ ಶರೀರ ಹಾಗೂ ಮನಸ್ಸಿನ ಮೇಲೆ ರತ್ನಗಳು ಪ್ರಭಾವ ಬೀರುತ್ತವೆ. </p></li><li><p>ಪ್ರತಿಯೊಂದು ರತ್ನಕ್ಕೂ ವಿಶಿಷ್ಟ ಬಣ್ಣವಿರುತ್ತದೆ. ಅದು ದೈವಿಕ ಹಾಗೂ ವಿಜ್ಞಾನಕ್ಕೆ ಅನುಸಾರವಾಗಿ ಪ್ರತಿಯೊಂದು ಬಣ್ಣದಲ್ಲಿ ಸತ್ವ, ರಜ ಹಾಗೂ ತಮ ಗುಣಗಳು ಇರುತ್ತದೆ. ಕೆಂಪು ಬಣ್ಣ ರಜೋಗುಣ, ಹಳದಿ ಬಣ್ಣ ಸತ್ವ ಗುಣ ಹಾಗೂ ಕಪ್ಪು ಬಣ್ಣ ತಮೋಗುಣವನ್ನು ಸೂಚಿಸುತ್ತದೆ. </p></li><li><p>ಕೆಂಪು ಬಣ್ಣದ ರತ್ನ ಸೂರ್ಯನಿಗೆ ಸಂಬಂಧಿಸಿದರೆ, ಹಳದಿ ಬಣ್ಣದ ಪುಷ್ಯರಾಗ ಗುರುಗ್ರಹಕ್ಕೆ ಸಂಬಂಧಿಸಿದೆ.</p></li><li><p>ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಯಾವ ಗ್ರಹವು ದುರ್ಬಲ ಅಥವಾ ದೋಷಿಯಾಗಿರುತ್ತದೆಯೋ ಆ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲಾಗುತ್ತದೆ. </p></li></ul><p><strong>ಸೂರ್ಯ ಗ್ರಹ:</strong></p><p><strong>ಮಾಣಿಕ್ಯ:</strong> ಸೂರ್ಯನ ಪ್ರಭಾವವಿರುವ ಸಿಂಹ ರಾಶಿಯವರು ಮಾಣಿಕ್ಯವನ್ನು ಧರಿಸಬೇಕು. ಇದರಿಂದ ಶೌರ್ಯ, ಧೈರ್ಯ, ಆರೋಗ್ಯ ವೃದ್ಧಿಯಾಗಲಿದೆ.</p><p><strong>ಚಂದ್ರ ಗ್ರಹ :</strong><br><strong>ಮುತ್ತು:</strong> ಚಂದ್ರನ ಪ್ರಭಾವವಿರುವ ಕರ್ಕಾಟಕ ರಾಶಿಯವರು ಮುತ್ತು ಧರಿಸುವುದು ಉತ್ತಮವಾಗಿದೆ. ಈ ರತ್ನ ಧರಿಸುವುದರಿಂದ ಸುಖ ಪ್ರಾಪ್ತಿಯಾಗಲಿದೆ.</p><p><strong>ಮಂಗಳ ಗ್ರಹ</strong> :<br><strong>ಹವಳ:</strong> ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಹವಳ ಧರಿಸುವುದರಿಂದ ತೇಜಸ್ಸು, ಲಾಭ ಹಾಗೂ ಯಶಸ್ಸು ದೊರೆಯುತ್ತದೆ. </p><p><strong>ಬುಧ ಗ್ರಹ:</strong><br><strong>ಪಚ್ಚೆ :</strong> ಮಿಥುನ ಮತ್ತು ಕನ್ಯಾ ರಾಶಿಯವರು ಧರಿಸಿದರೆ ಬುಧನ ಅನುಗ್ರಹವಿರುವ ರಾಶಿಗಳಾಗಿವೆ. ಬುಧಗ್ರಹಕ್ಕೆ ಅನುಸಾರವಾಗಿ ಭೌತಿಕ ಕ್ಷಮತೆ, ವಾಕ್ ಶಕ್ತಿ ಸುಧಾರಣೆ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಸುಧಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.</p><p><strong>ಗುರು ಗ್ರಹ:</strong> <br><strong>ಪುಷ್ಯರಾಗ :</strong> ಧನಸ್ಸು ಮತ್ತು ಮೀನ ರಾಶಿಯವರು ಪುಷ್ಯರಾಗ ಧರಿಸುವುದರಿಂದ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ ಎಂದು ಹೇಳಲಾಗುತ್ತದೆ.</p><p><strong>ಶುಕ್ರ ಗ್ರಹ:</strong><br><strong>ವಜ್ರ :</strong> ವೃಷಭ ಮತ್ತು ತುಲಾ ರಾಶಿಯವರು ವಜ್ರ ಧರಿಸುವುದು ಶುಭಕರವಾಗಿದೆ. ವೀರ್ಯ ವೃದ್ಧಿ, ವೈವಾಹಿಕ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. </p><p><strong>ಶನಿ ಗ್ರಹ:</strong> <br><strong>ನೀಲಾ:</strong> ಮಕರ ಮತ್ತು ಕುಂಭ ರಾಶಿಯವರು ನೀಲಾ ರತ್ನ ಧರಿಸಬೇಕು. ಇದರಿಂದಾಗಿ ಚಿಂತನಶೀಲತೆ ಹೆಚ್ಚಾಗುವುದರೊಂದಿಗೆ ಬುದ್ಧಿ ಶುರುಕುಗೊಳ್ಳುತ್ತದೆ. </p>.ಸರ್ವೇ ಶಾಮೆಕಾದಶಿ: ಇದರ ಆಚರಣೆಯಿಂದ ಸಿಗುವ ಶುಭಫಲಗಳೇನು?.<p><strong>ಧರಿಸುವ ಬಗೆ:</strong> </p><ul><li><p>ರತ್ನಗಳನ್ನು ಸ್ತ್ರೀಯರು ಎಡ ಕೈಗೆ ಧರಿಸಬೇಕು. ಎಡ ಕೈ ಚಂದ್ರನಾಡಿಗೆ ಸಂಬಂಧಿಸಿದಾಗಿರುವುದರಿಂದ, ಸ್ತ್ರೀಯರಿಗೆ ಉತ್ತಮ ಫಲ ದೊರೆಯುತ್ತದೆ.</p></li><li><p>ಪುರುಷರು ಬಲ ಕೈಗೆ ಈ ರತ್ನಗಳನ್ನು ಧರಿಸಬೇಕು. ಬಲ ಕೈ ಸೂರ್ಯ ನಾಡಿಗೆ ಸಂಬಂಧಿಸಿರುವುದರಿಂದ ಪುರುಷರಿಗೆ ಉತ್ತಮ ಫಲ ದೊರೆಯುತ್ತದೆ.</p></li><li><p>ಆಗ್ರಹದ ವಾರದಂದು ( ಆ ರಾಶಿಗೆ ನಿಗದಿಯಾದ ದಿನ) ಸೂರ್ಯೋದಯದ ನಂತರ ರತ್ನಧಾರಣೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಹಾಗೂ ನಕ್ಷತ್ರಗಳಿಗೆ ಅನುಸಾರವಾಗಿ ಪ್ರತೀ ರಾಶಿಗೂ ಒಂದೊಂದು ವಿಶೇಷ ರತ್ನಗಳಿವೆ. ರಾಶಿಗೆ ಅನುಗುಣವಾಗಿ ರತ್ನಗಳನ್ನು ಧರಿಸುವುದರಿಂದ ಶುಭಫಲ ಹಾಗೂ ರಾಶಿಯಲ್ಲಿನ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.</p><p>ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ರತ್ನಗಳಲ್ಲಿ ಖನಿಜ ಹಾಗೂ ಜೈವಿಕ ರತ್ನಗಳು ಎಂಬ ಎರಡು ಪ್ರಕಾರಗಳಿವೆ. </p>.ಈ ರತ್ನಗಳನ್ನು ಧರಿಸುವುದರಿಂದ, ರಾಶಿ ದೋಷ ಪರಿಹಾರವಾಗಲಿದೆ.ಧನುರ್ಮಾಸ ಆರಂಭ; ತರಕಾರಿ ಧಾರಣೆ ಕುಸಿತ. <ul><li><p>ಜೈವಿಕ ರತ್ನಗಳು ಎಂದರೆ, ಜೀವಂತವಿರುವ ಜೀವಿಗಳ ಉತ್ಪನ್ನದಿಂದ ತಯಾರಿಸಿದ ರತ್ನಗಳಾಗಿವೆ. <br><strong>ಉದಾಹರಣೆ:</strong> ಮುತ್ತು, ಹವಳ. </p></li><li><p>ಖನಿಜ ರತ್ನಗಳು ಎಂದರೆ, ಭೂಗರ್ಭದಲ್ಲಿ ರಾಸಾಯನಿಕ ಪ್ರಕ್ರಿಯೆಯಿಂದ ನೂರಾರು ವರ್ಷಗಳ ಕಾಲ ಸಿದ್ಧವಾದವುಗಳಾಗಿವೆ. </p></li><li><p><strong>ಉದಾಹರಣೆ:</strong> ಮಾಣಿಕ್ಯ, ಪದ್ಮರಾಗ, ಪಚ್ಚೆ ಹಾಗೂ ನೀಲ ಇತ್ಯಾದಿಗಳು.</p></li></ul><p><strong>ರತ್ನಧಾರಣೆಯ ಮಹತ್ವ:</strong> </p><ul><li><p>ರತ್ನಗಳ ಗುಣ ಧರ್ಮಕ್ಕೆ ಅನುಸಾರವಾಗಿ ರತ್ನ ಧರಿಸುವ ವ್ಯಕ್ತಿಯ ಶರೀರ ಹಾಗೂ ಮನಸ್ಸಿನ ಮೇಲೆ ರತ್ನಗಳು ಪ್ರಭಾವ ಬೀರುತ್ತವೆ. </p></li><li><p>ಪ್ರತಿಯೊಂದು ರತ್ನಕ್ಕೂ ವಿಶಿಷ್ಟ ಬಣ್ಣವಿರುತ್ತದೆ. ಅದು ದೈವಿಕ ಹಾಗೂ ವಿಜ್ಞಾನಕ್ಕೆ ಅನುಸಾರವಾಗಿ ಪ್ರತಿಯೊಂದು ಬಣ್ಣದಲ್ಲಿ ಸತ್ವ, ರಜ ಹಾಗೂ ತಮ ಗುಣಗಳು ಇರುತ್ತದೆ. ಕೆಂಪು ಬಣ್ಣ ರಜೋಗುಣ, ಹಳದಿ ಬಣ್ಣ ಸತ್ವ ಗುಣ ಹಾಗೂ ಕಪ್ಪು ಬಣ್ಣ ತಮೋಗುಣವನ್ನು ಸೂಚಿಸುತ್ತದೆ. </p></li><li><p>ಕೆಂಪು ಬಣ್ಣದ ರತ್ನ ಸೂರ್ಯನಿಗೆ ಸಂಬಂಧಿಸಿದರೆ, ಹಳದಿ ಬಣ್ಣದ ಪುಷ್ಯರಾಗ ಗುರುಗ್ರಹಕ್ಕೆ ಸಂಬಂಧಿಸಿದೆ.</p></li><li><p>ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಯಾವ ಗ್ರಹವು ದುರ್ಬಲ ಅಥವಾ ದೋಷಿಯಾಗಿರುತ್ತದೆಯೋ ಆ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲಾಗುತ್ತದೆ. </p></li></ul><p><strong>ಸೂರ್ಯ ಗ್ರಹ:</strong></p><p><strong>ಮಾಣಿಕ್ಯ:</strong> ಸೂರ್ಯನ ಪ್ರಭಾವವಿರುವ ಸಿಂಹ ರಾಶಿಯವರು ಮಾಣಿಕ್ಯವನ್ನು ಧರಿಸಬೇಕು. ಇದರಿಂದ ಶೌರ್ಯ, ಧೈರ್ಯ, ಆರೋಗ್ಯ ವೃದ್ಧಿಯಾಗಲಿದೆ.</p><p><strong>ಚಂದ್ರ ಗ್ರಹ :</strong><br><strong>ಮುತ್ತು:</strong> ಚಂದ್ರನ ಪ್ರಭಾವವಿರುವ ಕರ್ಕಾಟಕ ರಾಶಿಯವರು ಮುತ್ತು ಧರಿಸುವುದು ಉತ್ತಮವಾಗಿದೆ. ಈ ರತ್ನ ಧರಿಸುವುದರಿಂದ ಸುಖ ಪ್ರಾಪ್ತಿಯಾಗಲಿದೆ.</p><p><strong>ಮಂಗಳ ಗ್ರಹ</strong> :<br><strong>ಹವಳ:</strong> ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಹವಳ ಧರಿಸುವುದರಿಂದ ತೇಜಸ್ಸು, ಲಾಭ ಹಾಗೂ ಯಶಸ್ಸು ದೊರೆಯುತ್ತದೆ. </p><p><strong>ಬುಧ ಗ್ರಹ:</strong><br><strong>ಪಚ್ಚೆ :</strong> ಮಿಥುನ ಮತ್ತು ಕನ್ಯಾ ರಾಶಿಯವರು ಧರಿಸಿದರೆ ಬುಧನ ಅನುಗ್ರಹವಿರುವ ರಾಶಿಗಳಾಗಿವೆ. ಬುಧಗ್ರಹಕ್ಕೆ ಅನುಸಾರವಾಗಿ ಭೌತಿಕ ಕ್ಷಮತೆ, ವಾಕ್ ಶಕ್ತಿ ಸುಧಾರಣೆ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಸುಧಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.</p><p><strong>ಗುರು ಗ್ರಹ:</strong> <br><strong>ಪುಷ್ಯರಾಗ :</strong> ಧನಸ್ಸು ಮತ್ತು ಮೀನ ರಾಶಿಯವರು ಪುಷ್ಯರಾಗ ಧರಿಸುವುದರಿಂದ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ ಎಂದು ಹೇಳಲಾಗುತ್ತದೆ.</p><p><strong>ಶುಕ್ರ ಗ್ರಹ:</strong><br><strong>ವಜ್ರ :</strong> ವೃಷಭ ಮತ್ತು ತುಲಾ ರಾಶಿಯವರು ವಜ್ರ ಧರಿಸುವುದು ಶುಭಕರವಾಗಿದೆ. ವೀರ್ಯ ವೃದ್ಧಿ, ವೈವಾಹಿಕ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. </p><p><strong>ಶನಿ ಗ್ರಹ:</strong> <br><strong>ನೀಲಾ:</strong> ಮಕರ ಮತ್ತು ಕುಂಭ ರಾಶಿಯವರು ನೀಲಾ ರತ್ನ ಧರಿಸಬೇಕು. ಇದರಿಂದಾಗಿ ಚಿಂತನಶೀಲತೆ ಹೆಚ್ಚಾಗುವುದರೊಂದಿಗೆ ಬುದ್ಧಿ ಶುರುಕುಗೊಳ್ಳುತ್ತದೆ. </p>.ಸರ್ವೇ ಶಾಮೆಕಾದಶಿ: ಇದರ ಆಚರಣೆಯಿಂದ ಸಿಗುವ ಶುಭಫಲಗಳೇನು?.<p><strong>ಧರಿಸುವ ಬಗೆ:</strong> </p><ul><li><p>ರತ್ನಗಳನ್ನು ಸ್ತ್ರೀಯರು ಎಡ ಕೈಗೆ ಧರಿಸಬೇಕು. ಎಡ ಕೈ ಚಂದ್ರನಾಡಿಗೆ ಸಂಬಂಧಿಸಿದಾಗಿರುವುದರಿಂದ, ಸ್ತ್ರೀಯರಿಗೆ ಉತ್ತಮ ಫಲ ದೊರೆಯುತ್ತದೆ.</p></li><li><p>ಪುರುಷರು ಬಲ ಕೈಗೆ ಈ ರತ್ನಗಳನ್ನು ಧರಿಸಬೇಕು. ಬಲ ಕೈ ಸೂರ್ಯ ನಾಡಿಗೆ ಸಂಬಂಧಿಸಿರುವುದರಿಂದ ಪುರುಷರಿಗೆ ಉತ್ತಮ ಫಲ ದೊರೆಯುತ್ತದೆ.</p></li><li><p>ಆಗ್ರಹದ ವಾರದಂದು ( ಆ ರಾಶಿಗೆ ನಿಗದಿಯಾದ ದಿನ) ಸೂರ್ಯೋದಯದ ನಂತರ ರತ್ನಧಾರಣೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>