ಸಿಲಿಕಾನ್ ಸಿಟಿ ಹೆಗ್ಗಳಿಕೆಯ ಬೆಂಗಳೂರು ಸೆಪ್ಟೆಂಬರ್ ಮೊದಲೆರಡು ವಾರ ಮಳೆಯಿಂದ ನಲುಗಿಹೋಗಿತ್ತು. ಐಟಿ ಕಾರಿಡಾರ್ಗಳ ತಾಣವಾಗಿರುವ ಹೊರವಲಯವೇ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಯಿತು. ಇದಕ್ಕೆಲ್ಲ ಕಾರಣ ರಾಜಕಾಲುವೆಗಳ ಒತ್ತುವರಿ. ಮಳೆನೀರು ಹರಿಯುವ ಸ್ಥಳವೆಲ್ಲ ಕಾಂಕ್ರೀಟ್ಮಯವಾಗಿದೆ. ದೊಡ್ಡದೊಡ್ಡ ಐಟಿ ಕಂಪನಿಗಳೂ ಈ ಒತ್ತುವರಿಯಲ್ಲಿ ಭಾಗಿಯಾಗಿರುವುದನ್ನು ಬಿಬಿಎಂಪಿ ದಾಖಲೆಗಳೇ ಸ್ಪಷ್ಟಪಡಿಸುತ್ತವೆ.