ನಂತರ ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಅರವಳಿಕೆ ತಜ್ಞ ಡಾ. ರವೀಂದ್ರನಾಥ ಅವರು ಹಾವು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಹಾವನ್ನು ಹೊರಬರುವಂತೆ ಮಾಡಲು ಫಿನಾಯಿಲ್ ಸಿಂಪಡಣೆ ಮಾಡಲಾಯಿತು. ಇದರ ವಾಸನೆಗೆ ನಾಗರಹಾವು ಮೂರ್ಛೆ ಹೋಗಿತ್ತು. ಕೂಡಲೇ ವೈದ್ಯಾಧಿಕಾರಿ ಹಾಗೂ ಲಿಂಗಸುಗೂರು ಉರಗತಜ್ಞ ಖಾಲಿದ್ ಚಾವೂಸ್ ಅವರು ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಿದ್ದಾರೆ.