‘ಡಿ.30 ರಂದು ದೇಶದ ವಿವಿಧೆಡೆ ಹೊಸದಾಗಿ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಂಗಳೂರು–ಮಡಗಾಂವ ನಡುವೆ ಸಂಚರಿಸಲಿರುವ ರೈಲು ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆಯಾಗಲಿದೆ. ತಾತ್ಕಾಲಿಕ ವೇಳಾಪಟ್ಟಿಯ ಅನ್ವಯ ಮಂಗಳೂರಿನಿಂದ ಬೆಳಿಗ್ಗೆ 8.30ಕ್ಕೆ ಹೊರಡುವ ರೈಲು ಕಾರವಾರಕ್ಕೆ ಮಧ್ಯಾಹ್ನ 12.10ಕ್ಕೆ ತಲುಪಲಿದೆ. ಮಡಗಾಂವದಿಂದ ಸಂಜೆ ಹೊರಡುವ ರೈಲು 6.57ಕ್ಕೆ ಪುನಃ ಕಾರವಾರಕ್ಕೆ ತಲುಪಲಿದೆ’ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.