ದಾರ್ಷ್ಟ್ಯದ ಮನೋಭಾವ ಬಿಡಿ, ಕೃಷಿ ಕಾಯ್ದೆ ಬೇಷರತ್ ಹಿಂಪಡೆಯಿರಿ: ಸೋನಿಯಾ ಆಗ್ರಹ

ನವದೆಹಲಿ: ‘ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ‘ಅನ್ನದಾತರ’ ಸಂಕಷ್ಟವನ್ನೂ ಗಮನಿಸದ, ದಾರ್ಷ್ಟ್ಯ ಮನೋಭಾವದ ಸರ್ಕಾರ ಅಧಿಕಾರದಲ್ಲಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬೇಷರತ್ ಆಗಿ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದೂ ಆಗ್ರಹಿಸಿದ್ದಾರೆ. ಈ ಕುರಿತ ಹೇಳಿಕೆಯಲ್ಲಿ, ‘ಜನರ ಭಾವನೆಗಳನ್ನು ಗೌರವಿಸದ ಸರ್ಕಾರ ಮತ್ತು ಅದರ ನಾಯಕರು ದೀರ್ಘ ಕಾಲ ಅಧಿಕಾರದಲ್ಲಿ ಉಳಿಯಲಾಗದು’ ಎಂದಿದ್ದಾರೆ.
‘ಪ್ರತಿಭಟನಾನಿರತ ರೈತರು ಯಾವುದೇ ಕಾರಣಕ್ಕೂ ಸರ್ಕಾರದ ನೀತಿಗಳ ಎದುರು ಮಂಡಿಯೂರಲಾರರು ಎಂಬುದು ಈಗ ಸ್ಪಷ್ಟವಾಗಿದೆ. ರೈತರು ಈಗ ಚಳಿ ಮತ್ತು ಮಳೆಯಲ್ಲಿ ಸಿಕ್ಕಿ ಸಾಯುತ್ತಿದ್ದಾರೆ. ಇನ್ನೂ ಸಮಯವಿದೆ. ಮೋದಿ ಸರ್ಕಾರ ದಾಷ್ಟ್ಯವನ್ನು ಬದಿಗಿಟ್ಟು, ಕೂಡಲೇ ಬೇಷರತ್ ಆಗಿ ನೂತನ ಕೃಷಿ ಕಾಯ್ದೆಗಳನ್ನು ಹಿಂದೆಪಡೆಯಬೇಕು’ ಎಂದಿದ್ದಾರೆ.
ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವುದೇ ನಿಜವಾದ ರಾಜಧರ್ಮ. ಹಾಗೂ ಮೃತಪಟ್ಟಿರುವ ರೈತರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಸೋನಿಯಾಗಾಂಧಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.