<p><strong>ಪುತ್ತೂರು:</strong> ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯು ಕಸದ ಸಮಸ್ಯೆಯನ್ನು ವೈಜ್ಞಾನಿಕವಾಗಿ ನಿಭಾಯಿಸಲು ಸುಸ್ಥಿರ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಮನೆ ಮನೆಯಿಂದ ಸಂಗ್ರಹಿಸುವ ಕಸದಿಂದ ಸಿಎನ್ಜಿಯನ್ನು (ಸಾಂದ್ರೀಕೃತ ನೈಸರ್ಗಿಕ ಅನಿಲ) ನಗರಸಭೆಯೇ ತಯಾರಿಸುತ್ತಿದೆ.</p>.<p>ಬಯೋಗ್ಯಾಸ್ ಯೋಜನೆಯಡಿ ನಗರದ ಹೊರವಲಯದ ಬನ್ನೂರಿನಲ್ಲಿ ಜೈವಿಕ ಅನಿಲ ಘಟಕವನ್ನು ನಗರಸಭೆಯು ಸ್ಥಾಪಿಸಿದೆ. ಪುತ್ತೂರು ರೋಟರಿ ಕ್ಲಬ್ (ಪೂರ್ವ)ನ ಸ್ವಚ್ಛ ಭಾರತ್ ಟ್ರಸ್ಟ್, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಗಳು ಈ ಯೋಜನೆ ಅನುಷ್ಠಾನಕ್ಕೆ ಕೈಜೋಡಿಸಿವೆ.</p>.<p>‘ನಗರದಲ್ಲಿ ನಿತ್ಯ 20 ಟನ್ನಿಂದ 22 ಟನ್ಗಳಷ್ಟು ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಸದ್ಯಕ್ಕೆ 6 ಟನ್ನಿಂದ 10 ಟನ್ಗಳಷ್ಟು ಹಸಿ ಕಸವನ್ನು ಸಿಎನ್ಜಿ ಉತ್ಪಾದನೆಗೆ ಬಳಸುತ್ತಿದ್ದೇವೆ. ನಗರಸಭೆ ವತಿಯಿಂದ ಸಿಎನ್ಜಿ ಉತ್ಪಾದಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು’ ಎಂದು ಪೌರಾಯುಕ್ತ ಮಧು ಎಸ್. ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಕಾರ್ಯನಿರ್ವಹಣೆ ಹೇಗೆ?</strong></p>.<p>ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತದೆ. ಹಸಿ ಕಸದಲ್ಲಿ ಉಳಿದುಕೊಂಡ ಅಲ್ಪಸ್ವಲ್ಪ ಪ್ಲಾಸ್ಟಿಕ್, ಮೊಟ್ಟೆಯ ಚಿಪ್ಪು, ಹಾಳೆ ತಟ್ಟೆ ಮೊದಲಾದ ಪದಾರ್ಥಗಳನ್ನು ಪೌರ ಸಿಬ್ಬಂದಿ ಬೇರ್ಪಡಿಸುತ್ತಾರೆ. ಆ ಹಸಿ ಕಸವನ್ನು ಕೊಚ್ಚುವ ಯಂತ್ರದ (ಶ್ರೆಡ್ಡರ್) ಮೂಲಕ 5 ಸೆಂ.ಮೀ ಉದ್ದದ ಚೂರುಗಳನ್ನಾಗಿ ಮಾಡಿ, ಬಳಿಕ ಇನ್ನೊಂದು ಯಂತ್ರದಲ್ಲಿ ನುಣುಪಾಗಿ ಅರೆಯಲಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ನೀರನ್ನು ಬೆರೆಸಿ ಸ್ಲರಿಯನ್ನು (ದ್ರವ ಗೊಬ್ಬರ) ತಯಾರಿಸಲಾಗುತ್ತದೆ.</p>.<p>‘ಸ್ಲರಿಯನ್ನು ಅನೇರೋಬಿಕ್ ಡೈಜೆಷನ್ (ಆಮ್ಲಜನಕರಹಿತ ವಾತಾವರಣದಲ್ಲಿ ಕೊಳೆಯಿಸುವುದು) ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಸ್ಲರಿಯಲ್ಲಿರುವ ಜೈವಿಕ ಪದಾರ್ಥಗಳನ್ನು ಸೂಕ್ಷ್ಮಾಣುಜೀವಿಗಳು ವಿಘಟನೆ ಮಾಡಿ, ಮೀಥೇನ್ ಮತ್ತು ಕಾರ್ಬನ್ ಡಯಾಕ್ಸೈಡ್ ಒಳಗೊಂಡ ಜೈವಿಕ ಅನಿಲವನ್ನು ಉತ್ಪಾದಿಸುತ್ತವೆ. ಈ ಅನಿಲದ ಕಾರ್ಬನ್ ಡಯಾಕ್ಸೈಡನ್ನು ಬೇರ್ಪಡಿಸಲಾಗುತ್ತದೆ. ಬಳಿಕ ಜೈವಿಕ ಅನಿಲವನ್ನು ಸಂಕ್ಷೇಪಣೆಗೆ (ಕಂಪ್ರೆಷನ್) ಒಳಪಡಿಸಿ ಸಿಎನ್ಜಿಯನ್ನು ತಯಾರಿಸಿ ಸಿಲಿಂಡರ್ಗಳಿಗೆ ತುಂಬಲಾಗುತ್ತದೆ’ ಎಂದು ಈ ಘಟಕಕ್ಕೆ ತಾಂತ್ರಿಕ ನೆರವು ಒದಗಿಸಿರುವ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಯ ಮಂಜುನಾಥ್ ಮಾಹಿತಿ ನೀಡಿದರು.</p>.<p>ಈ ಘಟಕ ಸ್ಥಾಪನೆಗೆ ಜಾಗ ಹಾಗೂ ಕಸವನ್ನು ನಗರಸಭೆ ಒದಗಿಸಿದರೆ, ಸಿಎನ್ಜಿ ಘಟಕಕ್ಕೆ ರೋಟರಿ ಕ್ಲಬ್ನ ಸ್ವಚ್ಛ ಭಾರತ್ ಟ್ರಸ್ಟ್, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಗಳು ಸೇರಿ ₹ 3 ಕೋಟಿ ಹೂಡಿಕೆ ಮಾಡಿವೆ. ಈ ಘಟಕದಲ್ಲಿ 9 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>‘ಈ ಘಟಕದಲ್ಲಿ ನಿತ್ಯ 350 ಕೆ.ಜಿ.ಗಳಷ್ಟು ಸಿಎನ್ಜಿ ಉತ್ಪಾದಿಸಬಹುದು. ಸದ್ಯಕ್ಕೆ ನಗರಸಭೆಯ ವಾಹನಗಳಿಗೆ ಈ ಸಿಎನ್ಜಿಯನ್ನು ಬಳಸುತ್ತಿದ್ದೇವೆ. ಈ ಸಿಎನ್ಜಿಯ ಮಾರಾಟಕ್ಕೆ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ) ಅನುಮತಿಯೂ ಈಚೆಗೆ ಸಿಕ್ಕಿದೆ’ ಎಂದು ಯೋಜನಾ ನಿರ್ದೇಶಕ ರಾಜೇಶ್ ಬಿಜ್ಜಂಗಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>‘ಪೌರಾಯುಕ್ತರ ಕಾರಿಗೆ ಕಸದ ಸಿಎನ್ಜಿ’</strong> </p><p>ನಗರಸಭೆಯ ಪೌರಾಯುಕ್ತರ ಕಾರಿಗೂ ಕಸದಿಂದ ತಯಾರಿಸುವ ಸಿಎನ್ಜಿಯನ್ನೇ ಬಳಸಲಾಗುತ್ತಿದೆ. ಕಸ ಸಾಗಿಸುವ ಎರಡು ವಾಹನಗಳು ಸೇರಿದಂತೆ ನಗರಸಭೆಯ ಐದು ವಾಹನಗಳು ಈ ಸಿಎನ್ಜಿಯನ್ನೇ ಇಂಧನವನ್ನಾಗಿ ಬಳಸುತ್ತಿವೆ.</p>.<div><blockquote>ಜನಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಕಸ ನಿರ್ವಹಣೆ ಸವಾಲಾಗಿತ್ತು. ಪರಿಸರಸ್ನೇಹಿ ಇಂಧನವಾದ ಸಿಎನ್ಜಿ ತಯಾರಿಕೆಯಿಂದ ಇದಕ್ಕೆ ಸುಸ್ಥಿರ ಪರಿಹಾರ ಸಿಕ್ಕಿದೆ. </blockquote><span class="attribution">–ಮಧು ಎಸ್.ಮನೋಹರ್, ಪೌರಾಯುಕ್ತರು ಪುತ್ತೂರು ನಗರಸಭೆ</span></div>.<div><blockquote>ಕಸದ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಪುತ್ತೂರು ನಗರ ಮಾದರಿ ಆಗಬೇಕು ಎಂಬುದು ನಮ್ಮ ದಶಕಗಳ ಕನಸು. ಅದು ಈಗ ಈಡೇರಿದೆ. </blockquote><span class="attribution">–ಕೃಷ್ಣ ನಾರಾಯಣ ಮುಳಿಯ ರೋಟರಿ ಸ್ವಚ್ಛ ಭಾರತ ಟ್ರಸ್ಟ್ ಅಧ್ಯಕ್ಷ</span></div>.<div><blockquote>ನಗರಸಭೆಯ ವಾಹನಗಳಿಗೆ ಬಳಸಿ ಮಿಕ್ಕಿದ ಸಿಎನ್ಜಿಯನ್ನು ಕ್ರಮೇಣ ಈ ಸಿಎನ್ಜಿಯನ್ನು ಮಾರುಕಟ್ಟೆಗೂ ಬಿಡುಗಡೆ ಮಾಡುವ ಉದ್ದೇಶವಿದೆ. </blockquote><span class="attribution">–ರಾಜೇಶ್ ಬಿಜ್ಜಂಗಳ, ಕಸದಿಂದ ಸಿಎನ್ಜಿ ತಯಾರಿಕೆ ಯೋಜನಾ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು:</strong> ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯು ಕಸದ ಸಮಸ್ಯೆಯನ್ನು ವೈಜ್ಞಾನಿಕವಾಗಿ ನಿಭಾಯಿಸಲು ಸುಸ್ಥಿರ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಮನೆ ಮನೆಯಿಂದ ಸಂಗ್ರಹಿಸುವ ಕಸದಿಂದ ಸಿಎನ್ಜಿಯನ್ನು (ಸಾಂದ್ರೀಕೃತ ನೈಸರ್ಗಿಕ ಅನಿಲ) ನಗರಸಭೆಯೇ ತಯಾರಿಸುತ್ತಿದೆ.</p>.<p>ಬಯೋಗ್ಯಾಸ್ ಯೋಜನೆಯಡಿ ನಗರದ ಹೊರವಲಯದ ಬನ್ನೂರಿನಲ್ಲಿ ಜೈವಿಕ ಅನಿಲ ಘಟಕವನ್ನು ನಗರಸಭೆಯು ಸ್ಥಾಪಿಸಿದೆ. ಪುತ್ತೂರು ರೋಟರಿ ಕ್ಲಬ್ (ಪೂರ್ವ)ನ ಸ್ವಚ್ಛ ಭಾರತ್ ಟ್ರಸ್ಟ್, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಗಳು ಈ ಯೋಜನೆ ಅನುಷ್ಠಾನಕ್ಕೆ ಕೈಜೋಡಿಸಿವೆ.</p>.<p>‘ನಗರದಲ್ಲಿ ನಿತ್ಯ 20 ಟನ್ನಿಂದ 22 ಟನ್ಗಳಷ್ಟು ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಸದ್ಯಕ್ಕೆ 6 ಟನ್ನಿಂದ 10 ಟನ್ಗಳಷ್ಟು ಹಸಿ ಕಸವನ್ನು ಸಿಎನ್ಜಿ ಉತ್ಪಾದನೆಗೆ ಬಳಸುತ್ತಿದ್ದೇವೆ. ನಗರಸಭೆ ವತಿಯಿಂದ ಸಿಎನ್ಜಿ ಉತ್ಪಾದಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು’ ಎಂದು ಪೌರಾಯುಕ್ತ ಮಧು ಎಸ್. ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಕಾರ್ಯನಿರ್ವಹಣೆ ಹೇಗೆ?</strong></p>.<p>ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತದೆ. ಹಸಿ ಕಸದಲ್ಲಿ ಉಳಿದುಕೊಂಡ ಅಲ್ಪಸ್ವಲ್ಪ ಪ್ಲಾಸ್ಟಿಕ್, ಮೊಟ್ಟೆಯ ಚಿಪ್ಪು, ಹಾಳೆ ತಟ್ಟೆ ಮೊದಲಾದ ಪದಾರ್ಥಗಳನ್ನು ಪೌರ ಸಿಬ್ಬಂದಿ ಬೇರ್ಪಡಿಸುತ್ತಾರೆ. ಆ ಹಸಿ ಕಸವನ್ನು ಕೊಚ್ಚುವ ಯಂತ್ರದ (ಶ್ರೆಡ್ಡರ್) ಮೂಲಕ 5 ಸೆಂ.ಮೀ ಉದ್ದದ ಚೂರುಗಳನ್ನಾಗಿ ಮಾಡಿ, ಬಳಿಕ ಇನ್ನೊಂದು ಯಂತ್ರದಲ್ಲಿ ನುಣುಪಾಗಿ ಅರೆಯಲಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ನೀರನ್ನು ಬೆರೆಸಿ ಸ್ಲರಿಯನ್ನು (ದ್ರವ ಗೊಬ್ಬರ) ತಯಾರಿಸಲಾಗುತ್ತದೆ.</p>.<p>‘ಸ್ಲರಿಯನ್ನು ಅನೇರೋಬಿಕ್ ಡೈಜೆಷನ್ (ಆಮ್ಲಜನಕರಹಿತ ವಾತಾವರಣದಲ್ಲಿ ಕೊಳೆಯಿಸುವುದು) ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಸ್ಲರಿಯಲ್ಲಿರುವ ಜೈವಿಕ ಪದಾರ್ಥಗಳನ್ನು ಸೂಕ್ಷ್ಮಾಣುಜೀವಿಗಳು ವಿಘಟನೆ ಮಾಡಿ, ಮೀಥೇನ್ ಮತ್ತು ಕಾರ್ಬನ್ ಡಯಾಕ್ಸೈಡ್ ಒಳಗೊಂಡ ಜೈವಿಕ ಅನಿಲವನ್ನು ಉತ್ಪಾದಿಸುತ್ತವೆ. ಈ ಅನಿಲದ ಕಾರ್ಬನ್ ಡಯಾಕ್ಸೈಡನ್ನು ಬೇರ್ಪಡಿಸಲಾಗುತ್ತದೆ. ಬಳಿಕ ಜೈವಿಕ ಅನಿಲವನ್ನು ಸಂಕ್ಷೇಪಣೆಗೆ (ಕಂಪ್ರೆಷನ್) ಒಳಪಡಿಸಿ ಸಿಎನ್ಜಿಯನ್ನು ತಯಾರಿಸಿ ಸಿಲಿಂಡರ್ಗಳಿಗೆ ತುಂಬಲಾಗುತ್ತದೆ’ ಎಂದು ಈ ಘಟಕಕ್ಕೆ ತಾಂತ್ರಿಕ ನೆರವು ಒದಗಿಸಿರುವ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಯ ಮಂಜುನಾಥ್ ಮಾಹಿತಿ ನೀಡಿದರು.</p>.<p>ಈ ಘಟಕ ಸ್ಥಾಪನೆಗೆ ಜಾಗ ಹಾಗೂ ಕಸವನ್ನು ನಗರಸಭೆ ಒದಗಿಸಿದರೆ, ಸಿಎನ್ಜಿ ಘಟಕಕ್ಕೆ ರೋಟರಿ ಕ್ಲಬ್ನ ಸ್ವಚ್ಛ ಭಾರತ್ ಟ್ರಸ್ಟ್, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಗಳು ಸೇರಿ ₹ 3 ಕೋಟಿ ಹೂಡಿಕೆ ಮಾಡಿವೆ. ಈ ಘಟಕದಲ್ಲಿ 9 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>‘ಈ ಘಟಕದಲ್ಲಿ ನಿತ್ಯ 350 ಕೆ.ಜಿ.ಗಳಷ್ಟು ಸಿಎನ್ಜಿ ಉತ್ಪಾದಿಸಬಹುದು. ಸದ್ಯಕ್ಕೆ ನಗರಸಭೆಯ ವಾಹನಗಳಿಗೆ ಈ ಸಿಎನ್ಜಿಯನ್ನು ಬಳಸುತ್ತಿದ್ದೇವೆ. ಈ ಸಿಎನ್ಜಿಯ ಮಾರಾಟಕ್ಕೆ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ) ಅನುಮತಿಯೂ ಈಚೆಗೆ ಸಿಕ್ಕಿದೆ’ ಎಂದು ಯೋಜನಾ ನಿರ್ದೇಶಕ ರಾಜೇಶ್ ಬಿಜ್ಜಂಗಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>‘ಪೌರಾಯುಕ್ತರ ಕಾರಿಗೆ ಕಸದ ಸಿಎನ್ಜಿ’</strong> </p><p>ನಗರಸಭೆಯ ಪೌರಾಯುಕ್ತರ ಕಾರಿಗೂ ಕಸದಿಂದ ತಯಾರಿಸುವ ಸಿಎನ್ಜಿಯನ್ನೇ ಬಳಸಲಾಗುತ್ತಿದೆ. ಕಸ ಸಾಗಿಸುವ ಎರಡು ವಾಹನಗಳು ಸೇರಿದಂತೆ ನಗರಸಭೆಯ ಐದು ವಾಹನಗಳು ಈ ಸಿಎನ್ಜಿಯನ್ನೇ ಇಂಧನವನ್ನಾಗಿ ಬಳಸುತ್ತಿವೆ.</p>.<div><blockquote>ಜನಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಕಸ ನಿರ್ವಹಣೆ ಸವಾಲಾಗಿತ್ತು. ಪರಿಸರಸ್ನೇಹಿ ಇಂಧನವಾದ ಸಿಎನ್ಜಿ ತಯಾರಿಕೆಯಿಂದ ಇದಕ್ಕೆ ಸುಸ್ಥಿರ ಪರಿಹಾರ ಸಿಕ್ಕಿದೆ. </blockquote><span class="attribution">–ಮಧು ಎಸ್.ಮನೋಹರ್, ಪೌರಾಯುಕ್ತರು ಪುತ್ತೂರು ನಗರಸಭೆ</span></div>.<div><blockquote>ಕಸದ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಪುತ್ತೂರು ನಗರ ಮಾದರಿ ಆಗಬೇಕು ಎಂಬುದು ನಮ್ಮ ದಶಕಗಳ ಕನಸು. ಅದು ಈಗ ಈಡೇರಿದೆ. </blockquote><span class="attribution">–ಕೃಷ್ಣ ನಾರಾಯಣ ಮುಳಿಯ ರೋಟರಿ ಸ್ವಚ್ಛ ಭಾರತ ಟ್ರಸ್ಟ್ ಅಧ್ಯಕ್ಷ</span></div>.<div><blockquote>ನಗರಸಭೆಯ ವಾಹನಗಳಿಗೆ ಬಳಸಿ ಮಿಕ್ಕಿದ ಸಿಎನ್ಜಿಯನ್ನು ಕ್ರಮೇಣ ಈ ಸಿಎನ್ಜಿಯನ್ನು ಮಾರುಕಟ್ಟೆಗೂ ಬಿಡುಗಡೆ ಮಾಡುವ ಉದ್ದೇಶವಿದೆ. </blockquote><span class="attribution">–ರಾಜೇಶ್ ಬಿಜ್ಜಂಗಳ, ಕಸದಿಂದ ಸಿಎನ್ಜಿ ತಯಾರಿಕೆ ಯೋಜನಾ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>