<p><strong>ಕೊಪ್ಪಳ:</strong> ನಗರದಲ್ಲಿ ಶುಕ್ರವಾರ ನಡೆದ ಮುಹಮ್ಮದ್ ಪೈಗಂಬರರ ಜಯಂತ್ಯುತ್ಸವದ ಮೆರವಣಿಗೆ ವೇಳೆ ಮುಸ್ಲಿಮರು ಇಲ್ಲಿನ ಗಡಿಯಾರ ಕಂಬದ ಗಜಾನನ ಮಿತ್ರ ಮಂಡಳಿಯ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.</p>.<p>ಮೆರವಣಿಗೆಯ ಜೊತೆಗೆ ಬಂದ 7ನೇ ವಾರ್ಡಿನ ವಾಹೀದ್ ಸೋಂಪೂರ್ ಮತ್ತು ಸಂಗಡಿಗರು ಗಣಪತಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಭೇಟಿ ನೀಡಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು.</p>.<p>ಬಳಿಕ ಪ್ರಸಾದ ಸೇವಿಸಿ, ಪರಸ್ಪರರು ಹಬ್ಬಕ್ಕೆ ಶುಭಾಶಯವ ವಿನಿಮಯ ಮಾಡಿಕೊಂಡರು. ಸ್ಥಳದಲ್ಲಿದ್ದ ಅಜ್ಜಪ್ಪ ಸ್ವಾಮಿ ಮತ್ತು ಸಿದ್ದಪ್ಪಜ್ಜ ಹಿರೇಮಠ ಪೂಜೆ ಕೈಗೊಳ್ಳಲು ಸಹಕಾರ ನೀಡಿದರು.</p>.<p>‘ಕೊಪ್ಪಳ ಕಾ ಯುವರಾಜ’ ಗಣಪತಿ ಮಂಡಳಿಯವರು ಗಾಂಧಿ ವೃತ್ತದ ಬಳಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ಮುಸಲ್ಮಾನರಿಗೆ ಪಲಾವ್, ಸೋನ್ ಪಾಪಡಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಹಿಂದೂ–ಮುಸ್ಲಿಮರ ಈ ಸೌಹಾರ್ದದ ನಡೆಗೆ ಸಾರ್ವಜನಿಕರಿಂದ ಹಾಗೂ ಪೊಲೀಸರಿಂದ ಮೆಚ್ಚುಗೆ ವ್ಯಕ್ತವಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ನಗರದಲ್ಲಿ ಶುಕ್ರವಾರ ನಡೆದ ಮುಹಮ್ಮದ್ ಪೈಗಂಬರರ ಜಯಂತ್ಯುತ್ಸವದ ಮೆರವಣಿಗೆ ವೇಳೆ ಮುಸ್ಲಿಮರು ಇಲ್ಲಿನ ಗಡಿಯಾರ ಕಂಬದ ಗಜಾನನ ಮಿತ್ರ ಮಂಡಳಿಯ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.</p>.<p>ಮೆರವಣಿಗೆಯ ಜೊತೆಗೆ ಬಂದ 7ನೇ ವಾರ್ಡಿನ ವಾಹೀದ್ ಸೋಂಪೂರ್ ಮತ್ತು ಸಂಗಡಿಗರು ಗಣಪತಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಭೇಟಿ ನೀಡಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು.</p>.<p>ಬಳಿಕ ಪ್ರಸಾದ ಸೇವಿಸಿ, ಪರಸ್ಪರರು ಹಬ್ಬಕ್ಕೆ ಶುಭಾಶಯವ ವಿನಿಮಯ ಮಾಡಿಕೊಂಡರು. ಸ್ಥಳದಲ್ಲಿದ್ದ ಅಜ್ಜಪ್ಪ ಸ್ವಾಮಿ ಮತ್ತು ಸಿದ್ದಪ್ಪಜ್ಜ ಹಿರೇಮಠ ಪೂಜೆ ಕೈಗೊಳ್ಳಲು ಸಹಕಾರ ನೀಡಿದರು.</p>.<p>‘ಕೊಪ್ಪಳ ಕಾ ಯುವರಾಜ’ ಗಣಪತಿ ಮಂಡಳಿಯವರು ಗಾಂಧಿ ವೃತ್ತದ ಬಳಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ಮುಸಲ್ಮಾನರಿಗೆ ಪಲಾವ್, ಸೋನ್ ಪಾಪಡಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಹಿಂದೂ–ಮುಸ್ಲಿಮರ ಈ ಸೌಹಾರ್ದದ ನಡೆಗೆ ಸಾರ್ವಜನಿಕರಿಂದ ಹಾಗೂ ಪೊಲೀಸರಿಂದ ಮೆಚ್ಚುಗೆ ವ್ಯಕ್ತವಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>