<p>ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ಚಿತ್ರ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ನಟ ಕಿರಣ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. </p>.ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ.<p>‘ರಿಷಬ್ ಶೆಟ್ಟಿಯವರ ಜೊತೆ ಕೆಲಸ ಮಾಡಬೇಕೆಂಬುದು ಹಲವು ವರ್ಷಗಳ ಹಂಬಲ. ಕಾಂತಾರ ಅಧ್ಯಾಯ-1ರಲ್ಲಿ ಸಿಕ್ಕ ಪುಟ್ಟ ಪಾತ್ರ ಈ ಹಂಬಲಕ್ಕೆ ಹುರುಪು ನೀಡಿತು. ಸಿನಿಮಾ ಕುರಿತಾದ ಅವರ ಪ್ರೀತಿ, ಶ್ರಮ, ಶ್ರದ್ದೆ, ಉತ್ಸಾಹದ ಕುರಿತು ಕೇಳಿದ ಮಾತುಗಳಿಗೆ ದೃಶ್ಯ ರೂಪ ದೊರೆಯಿತು. ಪುಟ್ಟದ್ದೇ ಆದರೂ ಜನ ಗುರುತಿಸುವಂತ ಪಾತ್ರ ನೀಡಿದ್ದಾರೆ‘ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.</p><p>ಕಾಂತಾರ ಅಧ್ಯಾಯ–1 ಸಿನಿಮಾ ಕುರಿತಂತೆ ರಾಜಕಾರಣಿಗಳು, ಬಾಲಿವುಡ್, ಸ್ಯಾಂಡಲ್ವುಡ್, ಸೇರಿದಂತೆ ಅನೇಕ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ರುಕ್ಕಿಣಿ ವಸಂತ್, ಗುಲ್ಕನ್ ದೇವಯ್ಯ, ಜಯರಾಮ್, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ಚಿತ್ರ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ನಟ ಕಿರಣ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. </p>.ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ.<p>‘ರಿಷಬ್ ಶೆಟ್ಟಿಯವರ ಜೊತೆ ಕೆಲಸ ಮಾಡಬೇಕೆಂಬುದು ಹಲವು ವರ್ಷಗಳ ಹಂಬಲ. ಕಾಂತಾರ ಅಧ್ಯಾಯ-1ರಲ್ಲಿ ಸಿಕ್ಕ ಪುಟ್ಟ ಪಾತ್ರ ಈ ಹಂಬಲಕ್ಕೆ ಹುರುಪು ನೀಡಿತು. ಸಿನಿಮಾ ಕುರಿತಾದ ಅವರ ಪ್ರೀತಿ, ಶ್ರಮ, ಶ್ರದ್ದೆ, ಉತ್ಸಾಹದ ಕುರಿತು ಕೇಳಿದ ಮಾತುಗಳಿಗೆ ದೃಶ್ಯ ರೂಪ ದೊರೆಯಿತು. ಪುಟ್ಟದ್ದೇ ಆದರೂ ಜನ ಗುರುತಿಸುವಂತ ಪಾತ್ರ ನೀಡಿದ್ದಾರೆ‘ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.</p><p>ಕಾಂತಾರ ಅಧ್ಯಾಯ–1 ಸಿನಿಮಾ ಕುರಿತಂತೆ ರಾಜಕಾರಣಿಗಳು, ಬಾಲಿವುಡ್, ಸ್ಯಾಂಡಲ್ವುಡ್, ಸೇರಿದಂತೆ ಅನೇಕ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ರುಕ್ಕಿಣಿ ವಸಂತ್, ಗುಲ್ಕನ್ ದೇವಯ್ಯ, ಜಯರಾಮ್, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>