<p><strong>ಲಖನೌ:</strong> ಲಾಸ್ ಏಂಜಲೀಸ್ನಲ್ಲಿ ನಡೆದ ‘ಲಖನೌ ಕಿರುಚಿತ್ರೋತ್ಸವ'ದಲ್ಲಿ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವು ಅತ್ಯುತ್ತಮ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ. </p><p>ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬಾಲಿವುಡ್ ನಟಿ ಹುಮಾ ಖುರೇಷಿ, 'ಕಿರುಚಿತ್ರಗಳು ಯಾವಾಗಲೂ ದೊಡ್ಡ ಸಂದೇಶವನ್ನು ನೀಡುತ್ತವೆ. ಕಲಾ ವಿಭಾಗದಲ್ಲಿ ಪ್ರಗತಿ ಸಾಧಿಸಲು ಬಯಸುವವರಿಗೆ ದೊಡ್ಡ ವೇದಿಕೆಯನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ.</p><p>ಹೆಚ್ಚಿನ ನಟರು ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಕಿರುಚಿತ್ರಗಳಿಂದ ಪ್ರಾರಂಭಿಸಿದ್ದಾರೆ. ಪ್ರತಿಭೆ ಇದ್ದರೆ ಕಿರುಚಿತ್ರಗಳ ಮೂಲಕ ಯಶಸ್ಸುಗಳಿಸಬಹುದು. ಸಣ್ಣ ಚಲನಚಿತ್ರಗಳು ದೊಡ್ಡ ಮಾದರಿಯಾಗಲಿದೆ' ಎಂದು ಹುಮಾ ಖುರೇಷಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.</p>.ಸಿಂಗ್ ಬಾಬು.. ಭಾವ ಬೆರಗು.<p>ಸಮೀರ್-ನೇಹಿ ಅಗರ್ವಾಲ್ ನಿರ್ಮಾಣದ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವನ್ನು ಹಿರಿಯ ಪತ್ರಕರ್ತ ಸುಧೀರ್ ಮಿಶ್ರಾ ಬರೆದಿದ್ದು, ಧೀರಜ್ ಭಟ್ನಾಗರ್ ನಿರ್ದೇಶಿಸಿದ್ದಾರೆ. ಖ್ಯಾತ ಅನಿಮೇಷನ್ ತಜ್ಞ ರಾಜೀವ್ ದ್ವಿವೇದಿ ಅನಿಮೇಷನ್ ಮಾಡಿದ್ದಾರೆ. ಈ ಚಿತ್ರವು ಮಾನವ-ವನ್ಯಜೀವಿ ಸಂಘರ್ಷವನ್ನು ಆಧರಿಸಿದೆ. </p><p>ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧೀರ್ ಮಿಶ್ರಾ ಅವರು, 'ಲಾಸ್ ಏಂಜಲೀಸ್ನಲ್ಲಿ ನಡೆದ ಇಂಡಿಪೆಂಡೆಂಟ್ ಶಾಟ್ಸ್ ಅವಾರ್ಡ್ಸ್ ಫೈನಲ್ನಲ್ಲಿ 25 ದೇಶಗಳ ಚಲನಚಿತ್ರಗಳು ಸೇರಿವೆ. ‘ಘುಸ್ಪೈಥಿಯಾ ಕೌನ್’ ಭಾರತವನ್ನು ಪ್ರತಿನಿಧಿಸುವ ಏಕೈಕ ಚಲನಚಿತ್ರವಾಗಿದೆ. ಈ ಚಿತ್ರವು ಗಾಜಿಯಾಬಾದ್ ನ್ಯಾಯಾಲಯಕ್ಕೆ ಚಿರತೆಯೊಂದು ಪ್ರವೇಶಿಸಿದ ನಂತರ ಸಂಭವಿಸಿದ ಗದ್ದಲದ ಸನ್ನಿವೇಶವನ್ನು ಹಿಡಿದಿರುವ ಕಥೆಯಾಗಿದೆ ಎಂದು ಹೇಳಿದ್ದಾರೆ.</p><p>ದೇಶದ ಹೆಚ್ಚಿನ ಭಾಗಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಕಡಿಯುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ' ಎಂದಿದ್ದಾರೆ.</p><p>ಲಖನೌ ಕಿರುಚಿತ್ರೋತ್ಸವದಲ್ಲಿ, 'ತುನೈ' ಅತ್ಯುತ್ತಮ ಚಿತ್ರ, 'ಗಂಗಾ ಪುತ್ರ' ಅತ್ಯುತ್ತಮ ಸಾಕ್ಷ್ಯಚಿತ್ರ ಮತ್ತು 'ದಡ್ಡು ಜಿಂದಾಬಾದ್' ಚಿತ್ರಕ್ಕಾಗಿ ಸಮರ್ ಜೈನ್ ಅತ್ಯುತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಲಾಸ್ ಏಂಜಲೀಸ್ನಲ್ಲಿ ನಡೆದ ‘ಲಖನೌ ಕಿರುಚಿತ್ರೋತ್ಸವ'ದಲ್ಲಿ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವು ಅತ್ಯುತ್ತಮ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ. </p><p>ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬಾಲಿವುಡ್ ನಟಿ ಹುಮಾ ಖುರೇಷಿ, 'ಕಿರುಚಿತ್ರಗಳು ಯಾವಾಗಲೂ ದೊಡ್ಡ ಸಂದೇಶವನ್ನು ನೀಡುತ್ತವೆ. ಕಲಾ ವಿಭಾಗದಲ್ಲಿ ಪ್ರಗತಿ ಸಾಧಿಸಲು ಬಯಸುವವರಿಗೆ ದೊಡ್ಡ ವೇದಿಕೆಯನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ.</p><p>ಹೆಚ್ಚಿನ ನಟರು ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಕಿರುಚಿತ್ರಗಳಿಂದ ಪ್ರಾರಂಭಿಸಿದ್ದಾರೆ. ಪ್ರತಿಭೆ ಇದ್ದರೆ ಕಿರುಚಿತ್ರಗಳ ಮೂಲಕ ಯಶಸ್ಸುಗಳಿಸಬಹುದು. ಸಣ್ಣ ಚಲನಚಿತ್ರಗಳು ದೊಡ್ಡ ಮಾದರಿಯಾಗಲಿದೆ' ಎಂದು ಹುಮಾ ಖುರೇಷಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.</p>.ಸಿಂಗ್ ಬಾಬು.. ಭಾವ ಬೆರಗು.<p>ಸಮೀರ್-ನೇಹಿ ಅಗರ್ವಾಲ್ ನಿರ್ಮಾಣದ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವನ್ನು ಹಿರಿಯ ಪತ್ರಕರ್ತ ಸುಧೀರ್ ಮಿಶ್ರಾ ಬರೆದಿದ್ದು, ಧೀರಜ್ ಭಟ್ನಾಗರ್ ನಿರ್ದೇಶಿಸಿದ್ದಾರೆ. ಖ್ಯಾತ ಅನಿಮೇಷನ್ ತಜ್ಞ ರಾಜೀವ್ ದ್ವಿವೇದಿ ಅನಿಮೇಷನ್ ಮಾಡಿದ್ದಾರೆ. ಈ ಚಿತ್ರವು ಮಾನವ-ವನ್ಯಜೀವಿ ಸಂಘರ್ಷವನ್ನು ಆಧರಿಸಿದೆ. </p><p>ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧೀರ್ ಮಿಶ್ರಾ ಅವರು, 'ಲಾಸ್ ಏಂಜಲೀಸ್ನಲ್ಲಿ ನಡೆದ ಇಂಡಿಪೆಂಡೆಂಟ್ ಶಾಟ್ಸ್ ಅವಾರ್ಡ್ಸ್ ಫೈನಲ್ನಲ್ಲಿ 25 ದೇಶಗಳ ಚಲನಚಿತ್ರಗಳು ಸೇರಿವೆ. ‘ಘುಸ್ಪೈಥಿಯಾ ಕೌನ್’ ಭಾರತವನ್ನು ಪ್ರತಿನಿಧಿಸುವ ಏಕೈಕ ಚಲನಚಿತ್ರವಾಗಿದೆ. ಈ ಚಿತ್ರವು ಗಾಜಿಯಾಬಾದ್ ನ್ಯಾಯಾಲಯಕ್ಕೆ ಚಿರತೆಯೊಂದು ಪ್ರವೇಶಿಸಿದ ನಂತರ ಸಂಭವಿಸಿದ ಗದ್ದಲದ ಸನ್ನಿವೇಶವನ್ನು ಹಿಡಿದಿರುವ ಕಥೆಯಾಗಿದೆ ಎಂದು ಹೇಳಿದ್ದಾರೆ.</p><p>ದೇಶದ ಹೆಚ್ಚಿನ ಭಾಗಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಕಡಿಯುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ' ಎಂದಿದ್ದಾರೆ.</p><p>ಲಖನೌ ಕಿರುಚಿತ್ರೋತ್ಸವದಲ್ಲಿ, 'ತುನೈ' ಅತ್ಯುತ್ತಮ ಚಿತ್ರ, 'ಗಂಗಾ ಪುತ್ರ' ಅತ್ಯುತ್ತಮ ಸಾಕ್ಷ್ಯಚಿತ್ರ ಮತ್ತು 'ದಡ್ಡು ಜಿಂದಾಬಾದ್' ಚಿತ್ರಕ್ಕಾಗಿ ಸಮರ್ ಜೈನ್ ಅತ್ಯುತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>