ಕೊಲೆಗೂ 15 ದಿನಗಳ ಮೊದಲು ದುಮ್ರಿಗುಡದಲ್ಲಿ ಬೀಡುಬಿಟ್ಟಿದ್ದ ಪತಿ, ಸಹ ಆರೋಪಿಗಳು ಸೇರಿದಂತೆ 40 ಸದಸ್ಯರ ತಂಡದಲ್ಲಿ ಭವಾನಿ ಕೂಡಾ ಸೇರಿದ್ದಳು. ಆಕೆ ಐಎನ್ಎಸ್ಎಎಸ್ ರೈಫಲ್ ಹೊತ್ತೊಯ್ಯುತ್ತಿದ್ದಳು ಮತ್ತು ಕೊಲೆ ನಡೆಸಿದ ತಂಡಕ್ಕೆ ಶಸ್ತ್ರಾಸ್ತ್ರ ನೆರವನ್ನು ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.