<p>ಆ್ಯಸಿಡಿಟಿ ಎಂಬುವುದು ಬಹುತೇಕರಿಗೆ ಕಾಡುವ ದೊಡ್ಡ ಆರೋಗ್ಯ ಸಮಸ್ಯೆ. ಇದನ್ನು ಆಯುರ್ವೇದದಲ್ಲಿ ಆಮ್ಲ ಪಿತ್ತ ಎಂದು ಕರೆಯುತ್ತಾರೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಇದನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.</p><p><strong>ಆ್ಯಸಿಡಿಟಿಗೆ ಮುಖ್ಯ ಕಾರಣಗಳು</strong></p><ul><li><p>ಸಮಯಕ್ಕೆ ಸರಿಯಾಗಿ ಊಟ ಸೇವಿಸದೆ ಯಾವುದೋ ಸಮಯದಲ್ಲಿ ಆಹಾರ ಸೇವಿಸುವುದರಿಂದ ಆ್ಯಸಿಡಿಟಿ ಉಂಟಾಗುತ್ತದೆ. </p></li><li><p>ಆಹಾರ ಪದ್ಧತಿಯಲ್ಲಿ ಏರುಪೇರಾದಾಗ ಉದಾಹರಣೆಗೆ ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಅತಿಯಾದ ಖಾರ ಸೇರಿದಂತೆ ಆ್ಯಸಿಡಿಟಿಗೆ ಕಾರಣವಾಗುವ ಆಹಾರ<strong> </strong>ಪದಾರ್ಥಗಳ ಹೆಚ್ಚು ಸೇವನೆಯಿಂದ ಆಮ್ಲ ಪಿತ್ತ ಉಂಟಾಗುತ್ತದೆ.</p></li><li><p>ಅತಿಯಾದ ರಾಸಾಯನಿಕ ಬಳಸಿ ಆಹಾರ ಸಿದ್ಧಪಡಿಸುವ ಹೋಟೆಲ್ಗಳಲ್ಲಿ ಊಟ ಮಾಡುವುದರಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ. </p></li><li><p>ರಾತ್ರಿ ಸಮಯದಲ್ಲಿ ಕಾಫಿ ಟೀ ಕುಡಿಯುವುದರಿಂದ ಆಮ್ಲ ಪಿತ್ತ ಉಂಟಾಗುತ್ತದೆ ಎಂಬುವುದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರ ಅಭಿಪ್ರಾಯವಾಗಿದೆ. </p><p><strong>ಇದರ ಮುಖ್ಯ ಲಕ್ಷಣಗಳು</strong></p></li></ul><ul><li><p>ಎದೆಯುರಿ</p></li></ul><ul><li><p>ಬಾಯಿಯಲ್ಲಿ ಹುಳಿ/ ಕಹಿ ಆಮ್ಲ ಬರುವುದು</p></li><li><p>ವಾಂತಿ ಬಂದಂತೆ ಆಗುವುದು</p></li><li><p>ತಲೆ ನೋವು</p></li><li><p>ಹೊಟ್ಟೆ ನೋವು</p></li><li><p>ಹಸಿವು ಆಗದೇ ಇರುವುದು</p></li><li><p>ಮಲ ವಿಸರ್ಜನೆ ಜಾಗದಲ್ಲಿ ಉರಿ ಆಗುವುದು </p></li><li><p>ಜೀರ್ಣಕ್ರಿಯೆಯಲ್ಲಿ ತೊಂದರೆ (ಅಜೀರ್ಣ) ಉಂಟಾಗುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.</p></li></ul>.ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು .<p><strong>ಈ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳುವುದು ಹೇಗೆ</strong></p><ul><li><p>ಸರಿಯಾದ ಸಮಯಕ್ಕೆ ಊಟ ಮಾಡುವುದು.</p></li><li><p>ಖಾರ, ಉಪ್ಪಿನಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು.</p></li><li><p>ಮಧ್ಯಾಹ್ನ ಊಟಕ್ಕೂ ಹತ್ತು ನಿಮಿಷ ಮೊದಲು ಚಿಟಿಕೆಯಷ್ಟು ಉಪ್ಪಿನ ಜತೆ ಚೂರು ಶುಂಠಿಯನ್ನು ಸೇವಿಸಬೇಕು.</p></li><li><p>ಹೆಚ್ಚಿನ ಪ್ರಮಾಣದ ಡೋಸೆಜ್ ಮಾತ್ರೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು.</p></li><li><p>ದಿನಕ್ಕೆ ಕನಿಷ್ಠ 3ಲೀ ನೀರು ಕುಡಿಯಲೇಬೇಕು</p></li><li><p>ಸೌತೆಕಾಯಿಯನ್ನು ರುಬ್ಬಿ ಮಜ್ಜಿಗೆ ಜತೆ ಕುಡಿಯುವುದರಿಂದ ಆಮ್ಲ ಪೀತ ಕಡಿಮೆ ಆಗುತ್ತದೆ. </p></li><li><p>ಬಿಸಿ ನೀರಿನಲ್ಲಿ 9–10 ಮೆಂತ್ಯೆ ಕಾಳನ್ನು ಹಾಕಿ ಕಾಲಿ ಹೊಟ್ಟೆಗೆ ಕುಡಿಯುವುದರಿಂದ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.</p></li><li><p>ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳಿನ ಜತೆಗೆ ಚಿಟಿಕೆಯಷ್ಟು ಅಜವಾನ ಬಿಸಿ ನೀರಿನಲ್ಲಿ ಸೇವಿಸುವುದರಿಂದ ಆ್ಯಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ ಎಂದು ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ಸಲಹೆ ನೀಡಿದ್ದಾರೆ.</p></li></ul><p><em>ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ್ಯಸಿಡಿಟಿ ಎಂಬುವುದು ಬಹುತೇಕರಿಗೆ ಕಾಡುವ ದೊಡ್ಡ ಆರೋಗ್ಯ ಸಮಸ್ಯೆ. ಇದನ್ನು ಆಯುರ್ವೇದದಲ್ಲಿ ಆಮ್ಲ ಪಿತ್ತ ಎಂದು ಕರೆಯುತ್ತಾರೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಇದನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.</p><p><strong>ಆ್ಯಸಿಡಿಟಿಗೆ ಮುಖ್ಯ ಕಾರಣಗಳು</strong></p><ul><li><p>ಸಮಯಕ್ಕೆ ಸರಿಯಾಗಿ ಊಟ ಸೇವಿಸದೆ ಯಾವುದೋ ಸಮಯದಲ್ಲಿ ಆಹಾರ ಸೇವಿಸುವುದರಿಂದ ಆ್ಯಸಿಡಿಟಿ ಉಂಟಾಗುತ್ತದೆ. </p></li><li><p>ಆಹಾರ ಪದ್ಧತಿಯಲ್ಲಿ ಏರುಪೇರಾದಾಗ ಉದಾಹರಣೆಗೆ ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಅತಿಯಾದ ಖಾರ ಸೇರಿದಂತೆ ಆ್ಯಸಿಡಿಟಿಗೆ ಕಾರಣವಾಗುವ ಆಹಾರ<strong> </strong>ಪದಾರ್ಥಗಳ ಹೆಚ್ಚು ಸೇವನೆಯಿಂದ ಆಮ್ಲ ಪಿತ್ತ ಉಂಟಾಗುತ್ತದೆ.</p></li><li><p>ಅತಿಯಾದ ರಾಸಾಯನಿಕ ಬಳಸಿ ಆಹಾರ ಸಿದ್ಧಪಡಿಸುವ ಹೋಟೆಲ್ಗಳಲ್ಲಿ ಊಟ ಮಾಡುವುದರಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ. </p></li><li><p>ರಾತ್ರಿ ಸಮಯದಲ್ಲಿ ಕಾಫಿ ಟೀ ಕುಡಿಯುವುದರಿಂದ ಆಮ್ಲ ಪಿತ್ತ ಉಂಟಾಗುತ್ತದೆ ಎಂಬುವುದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರ ಅಭಿಪ್ರಾಯವಾಗಿದೆ. </p><p><strong>ಇದರ ಮುಖ್ಯ ಲಕ್ಷಣಗಳು</strong></p></li></ul><ul><li><p>ಎದೆಯುರಿ</p></li></ul><ul><li><p>ಬಾಯಿಯಲ್ಲಿ ಹುಳಿ/ ಕಹಿ ಆಮ್ಲ ಬರುವುದು</p></li><li><p>ವಾಂತಿ ಬಂದಂತೆ ಆಗುವುದು</p></li><li><p>ತಲೆ ನೋವು</p></li><li><p>ಹೊಟ್ಟೆ ನೋವು</p></li><li><p>ಹಸಿವು ಆಗದೇ ಇರುವುದು</p></li><li><p>ಮಲ ವಿಸರ್ಜನೆ ಜಾಗದಲ್ಲಿ ಉರಿ ಆಗುವುದು </p></li><li><p>ಜೀರ್ಣಕ್ರಿಯೆಯಲ್ಲಿ ತೊಂದರೆ (ಅಜೀರ್ಣ) ಉಂಟಾಗುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.</p></li></ul>.ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು .<p><strong>ಈ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳುವುದು ಹೇಗೆ</strong></p><ul><li><p>ಸರಿಯಾದ ಸಮಯಕ್ಕೆ ಊಟ ಮಾಡುವುದು.</p></li><li><p>ಖಾರ, ಉಪ್ಪಿನಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು.</p></li><li><p>ಮಧ್ಯಾಹ್ನ ಊಟಕ್ಕೂ ಹತ್ತು ನಿಮಿಷ ಮೊದಲು ಚಿಟಿಕೆಯಷ್ಟು ಉಪ್ಪಿನ ಜತೆ ಚೂರು ಶುಂಠಿಯನ್ನು ಸೇವಿಸಬೇಕು.</p></li><li><p>ಹೆಚ್ಚಿನ ಪ್ರಮಾಣದ ಡೋಸೆಜ್ ಮಾತ್ರೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು.</p></li><li><p>ದಿನಕ್ಕೆ ಕನಿಷ್ಠ 3ಲೀ ನೀರು ಕುಡಿಯಲೇಬೇಕು</p></li><li><p>ಸೌತೆಕಾಯಿಯನ್ನು ರುಬ್ಬಿ ಮಜ್ಜಿಗೆ ಜತೆ ಕುಡಿಯುವುದರಿಂದ ಆಮ್ಲ ಪೀತ ಕಡಿಮೆ ಆಗುತ್ತದೆ. </p></li><li><p>ಬಿಸಿ ನೀರಿನಲ್ಲಿ 9–10 ಮೆಂತ್ಯೆ ಕಾಳನ್ನು ಹಾಕಿ ಕಾಲಿ ಹೊಟ್ಟೆಗೆ ಕುಡಿಯುವುದರಿಂದ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.</p></li><li><p>ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳಿನ ಜತೆಗೆ ಚಿಟಿಕೆಯಷ್ಟು ಅಜವಾನ ಬಿಸಿ ನೀರಿನಲ್ಲಿ ಸೇವಿಸುವುದರಿಂದ ಆ್ಯಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ ಎಂದು ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ಸಲಹೆ ನೀಡಿದ್ದಾರೆ.</p></li></ul><p><em>ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>