ನವದೆಹಲಿ: ವಿಮಾನನಿಲ್ದಾಣಗಳ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಆಕಾಶಬುಟ್ಟಿ, ಶುಭಾಶಯ ಕೋರುವ ಗಾಳಿಪಟ ಹಾರಿಸುವುದನ್ನು ನಿಷೇಧಿಸಲು ನಾಗರಿಕ ವಿಮಾನಯಾನ ಸಚಿವಾಲಯ ಚಿಂತಿಸಿದೆ.
ಇವುಗಳಿಂದ ಪೈಲಟ್ಗಳಿಗೆ ಮಾತ್ರವಲ್ಲದೆ, ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಲಿದೆ. ಹೀಗಾಗಿ ಈಗಿರುವ ವಿಮಾನ ಸಂಚಾರ ನಿಯಮಗಳಿಗೆ ಶೀಘ್ರವೇ ತಿದ್ದುಪಡಿ ತರಲು ಉದ್ದೇಶಿಸಿದೆ.
ಗಾಳಿಪಟ ಹಾರಿಸುವುದರಿಂದ ವಿಮಾನನಿಲ್ದಾಣದ ಕಾರ್ಯಾಚರಣೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಆಕಾಶಬುಟ್ಟಿ ಹಾರಿಸಿರುವುದು ಕಂಡುಬಂದಿದೆ. ಈ ದೀಪಗಳು ವಿಮಾನಗಳಿಗೆ ಅಪಾಯ ಉಂಟು ಮಾಡಬಹುದು. ಈ ಕಾರಣಕ್ಕೆ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.