ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಹುಂಡಿಯನ್ನು ಶುಕ್ರವಾರ ಒಡೆದು ಎಣಿಕೆಮಾಡಲಾಗಿ ಒಟ್ಟು ₹ 28,91,685 ಸಂಗ್ರಹವಾಗಿದೆ. ಕಳೆದ ಡಿ.20 ರಿಂದ ಮೂರು ತಿಂಗಳ ಅವಧಿಯಲ್ಲಿ ಈ ಹಣ ಸಂಗ್ರಹವಾಗಿದೆ.
ಇದರಲ್ಲಿ ಅಮಾನ್ಯಗೊಂಡ ನೋಟುಗಳಲ್ಲಿ 1,000 ಮುಖಬೆಲೆಯ ಒಟ್ಟು 9 ನೋಟುಗಳು ಹಾಗೂ 500 ಮುಖಬೆಲೆಯ ಒಟ್ಟು 106 ನೋಟುಗಳು ಹುಂಡಿಯಲ್ಲಿರುವುದು ಕಂಡುಬಂದಿತು.
ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ ಇವರ ನೇತೃತ್ವದಲ್ಲಿ ನಡೆದ ಏಣಿಕಾ ಕಾರ್ಯವು ಸಂಜೆಯ ವೇಳೆಗೆ ಪೂರ್ಣಗೊಂಡಿತು. ಕಟ್ಟೆಮನಿ ದೈವಸ್ಥರು ಹಾಗೂ ದೇವರಮನಿ ಕರಿಯಪ್ಪ, ಎಸ್.ಪ್ರೇಮಾನಂದಗೌಡ, ಕೆಂಪಳ್ಳಿ ಸಿದ್ದನಗೌಡ್ರು, ಸಕ್ರೀಗೌಡ್ರು, ಕೆ.ಎಸ್.ನಾಗರಾಜಗೌಡ್ರು, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಚ್.ಹಾಲಪ್ಪ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಎಸ್.ಮಲ್ಲಿನಾಥ ಪಾಲ್ಗೊಂಡಿದ್ದರು.