ಬೆಂಗಳೂರು: ‘ಶೂದ್ರ’ ಸಾಹಿತ್ಯಕ, ಸಾಂಸ್ಕೃತಿಕ ದ್ವೈಮಾಸಿಕದ ವತಿಯಿಂದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಗೌರವ ಕಾವ್ಯ ಸ್ಪರ್ಧೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯಾ ವರ್ಷದ ಅತ್ಯುತ್ತಮ ಕವನ ಸಂಕಲನಕ್ಕೆ ₨10,000 ನಗದು ಹಾಗೂ ಪ್ರಶಸ್ತಿಪತ್ರ ನೀಡಲಾಗುವುದು. 2013ರಲ್ಲಿ ಪ್ರಕಟವಾದ ಸಂಕಲನದ ಎರಡು ಪ್ರತಿಗಳನ್ನು ಆಗಸ್ಟ್ 5ರೊಳಗೆ ಕಳುಹಿಸಿಕೊಡಬೇಕು.
ವಿಳಾಸ: ಶೂದ್ರ ಶ್ರೀನಿವಾಸ್, ‘ಕಾವಿಮನೆ’, ಮಾನಸ ವಿದ್ಯಾ ಕೇಂದ್ರ, ಅಣ್ಣಯ್ಯ ರೆಡ್ಡಿ ಬಡಾವಣೆ, ಜೆ.ಪಿ.ನಗರ ಆರನೇ ಹಂತ, ಬೆಂಗಳೂರು–78, ದೂರವಾಣಿ: 080– 41315196.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.