ಮಹದೇವಪುರ ಕ್ಷೇತ್ರದ ಹೂಡಿ ವಾರ್ಡ್ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ರಸ್ತೆ ಪಕ್ಕದಲ್ಲಿ ಕಳೆದ ಒಂದು ತಿಂಗಳಿಂದಲೂ ಕಸದ ರಾಶಿ ಬಿದ್ದಿದ್ದು, ಅದರಿಂದ ದುರ್ನಾತ ಹೊರಸೂಸುತ್ತಿದೆ. ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡಿಸಿಕೊಂಡಿದೆ. ಆದರೂ ಕಸವನ್ನು ಸಂಬಂಧಪಟ್ಟವರು ತೆಗೆಸಿ ಹಾಕಲು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ ಪ್ರಜಾವಾಣಿ ಚಿತ್ರ