ಬೆಂಗಳೂರು: ಇಂದಿರಾನಗರದ ನೂರು ಅಡಿ ರಸ್ತೆಗೆ ಜನಪದ ತಜ್ಞ ಎಸ್.ಕೆ.ಕರೀಂ ಖಾನ್ ಅವರ ಹೆಸರು ಇಡುವ ಕಾರ್ಯಕ್ರಮವನ್ನು ಆ. 31ರಂದು ಸಂಘಟಿಸಲು ನಿರ್ಧರಿಸಲಾಗಿದೆ.
ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಬುಧವಾರ ಮೇಯರ್ ಅವರು ಕನ್ನಡ ಒಕ್ಕೂಟದ ಸದಸ್ಯರ ಜತೆ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ‘ರಸ್ತೆಗೆ ಕರೀಂ ಖಾನ್ ಅವರ ಹೆಸರು ಇಡಬೇಕು ಎಂದು 2006ರಲ್ಲಿ ಬಿಬಿಎಂಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಕಾರ್ಯಕ್ರಮ ನಿಗದಿ ಆಗಿರುವುದು ಸಂತಸ ತಂದಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.