ADVERTISEMENT

ಸಾಲುಮರದ ತಿಮ್ಮಕ್ಕಗೆ ಬಿಎಂಎಸ್‌ ಕಲಾಸಿರಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:42 IST
Last Updated 19 ಮಾರ್ಚ್ 2018, 20:42 IST
ಸಾಲುಮರದ ತಿಮ್ಮಕ್ಕಗೆ ಬಿಎಂಎಸ್‌ ಕಲಾಸಿರಿ ಪ್ರಶಸ್ತಿ
ಸಾಲುಮರದ ತಿಮ್ಮಕ್ಕಗೆ ಬಿಎಂಎಸ್‌ ಕಲಾಸಿರಿ ಪ್ರಶಸ್ತಿ   

ನೆಲಮಂಗಲ: ನಂದರಾಮಯ್ಯನಪಾಳ್ಯದ ಬ್ಲೂಮೂನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ‘ಬಿಎಂಎಸ್‌ ಕಲಾಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಕುರಿತ ದೃಶ್ಯಕಾವ್ಯ ಎಲ್ಲರ ಗಮನ ಸೆಳೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗ
ಳಿಗೆ ಗಿಡಗಳನ್ನು ಬಹುಮಾನವಾಗಿ ನೀಡಲಾಯಿತು.

‘ಪರಿಸರ ಸಂರಕ್ಷಣೆ ಬಗ್ಗೆ ಪೋಷಕರು ಮಕ್ಕಳಿಗೆ ಅರಿವು ಮೂಡಿಸಬೇಕು. ಅವರಿಂದ ಒಂದೊಂದು ಗಿಡ ಬೆಳೆಸಬೇಕು. ಬಳಿಕ, ಅವು ಮಕ್ಕಳನ್ನು ಕಾಪಾಡುತ್ತವೆ’ ಎಂದು ಸಾಲುಮರದ ತಿಮ್ಮಕ್ಕ ಸಲಹೆ ನೀಡಿದರು.

ADVERTISEMENT

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ‘ಮನುಷ್ಯನ ಬಕಾಸುರ ಪ್ರವೃತ್ತಿಯಿಂದಾಗಿ ಸಮಾಜದಲ್ಲಿ ಭ್ರಷ್ಟಾಚಾರ, ಅನಾಚಾರ ಹೆಚ್ಚುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶ್ರೀಮಂತಿಕೆ ಬೇರೆ, ಸಂಸ್ಕಾರ ಬೇರೆ. ಆದರೆ, ಜೈಲಿಗೆ ಹೋಗಿ ಬಂದವರಿಗೆ ನಮಸ್ಕರಿಸುವ ಹಾಗೂ ಪುರಸ್ಕರಿ
ಸುವ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.