ಭಾಲ್ಕಿ: ‘ಅನಿಶ್ಚಿತ ಬದುಕಿನಲ್ಲಿ ಜೀವನದ ಸಾರ್ಥಕತೆ ಕಾಣಲು ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆಯುವುದು ಅಗತ್ಯ’ ಎಂದು ಹಿರೇಮಠ ಕಲ್ಲೂರಿನ ಮೃತ್ಯುಂಜಯ ಶಿವಚಾರ್ಯರು ಹೇಳಿದರು.
ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಜೈ ಭವಾನಿ, ದತ್ತಾತ್ರೇಯ ಎಳಗುತ್ತಿ ಆಶ್ರಮದಲ್ಲಿ ಮಂಗಳವಾರ ನಡೆದ ಸತ್ಸಂಗ ಸಮಾರೋಪ, 21ನೇ ದತ್ತ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಕಲ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು. ಅದನ್ನು ಕೇವಲ ಲೌಕಿಕ ಸುಖಕ್ಕಾಗಿ ಬಲಿಕೊಡದೆ, ಗುರು ತೋರಿದ ಮಾರ್ಗದಲ್ಲಿ ನಡೆದು ಸಂತಸದ ಬದುಕು ಸಾಗಿಸಬೇಕು’ ಎಂದು ತಿಳಿ ಹೇಳಿದರು .
ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಮಾನವರು ಮೊದಲು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಅಂದಾಗ ಮಾತ್ರ ಇಡೀ ಸಮಾಜ ಅವರನ್ನು ಪ್ರೀತಿಸಲು ಸಾಧ್ಯ’ ಎಂದು ಮಾರ್ಮಿಕವಾಗಿ ನುಡಿದರು.
ಕಲಬುರ್ಗಿಯ ರೇವಣಸಿದ್ದಯ್ಯಾ ಶಾಸ್ತ್ರಿ ಮಾತನಾಡಿ, ‘ಸಾರ ಸಜ್ಜನರ ಸಂಗ ಲೇಸು ಎಂದು ಬಸವಾದಿ ಶಿವಶರಣರು ತಿಳಿಸಿದ್ದಾರೆ. ಅವರ ವಾಣಿಯಂತೆ ಎಲ್ಲರೂ ಬಾಳಬೇಕು’ ಎಂದರು.
ಚನ್ನಬಸಪ್ಪಾ ಅಪ್ಪಾಜಿ, ಶಿವಕುಮಾರ ಶಿವಚಾರ್ಯ, ನೀಲಕಂಠ ಸ್ವಾಮೀಜಿ, ಸುಶೀಲಾಬಾಯಿ, ಡಿ.ಸಿ.ಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಭೀಮರಾವ ಪಾಟೀಲ ಮಾತನಾಡಿದರು.
ಮಾತೋಶ್ರೀ ಗೋದಾವರಿ ತಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ ಕಡಗಂಚಿ, ರೇವಣಸಿದ್ದಪ್ಪಾ ಏಳಗುತ್ತಿ, ಬಸಯ್ಯಾ ಸ್ವಾಮಿ, ಭೀಮರೆಡ್ಡಿ ಕೊತ್ತುರ, ಗೊರಕ ಜಮಾದರ, ರಾಮಚಂದ್ರಪ್ಪ, ಶಿವರಾಜ ಕಾಳಗಪೂರೆ, ಕಂಟೆಪ್ಪಾ ಗಂಗಾ ಪಾಟೀಲ, ಸುರೇಶ ದುಬಲಗುಂಡಿ, ಸಂಗಮೇಶ ಹೊನ್ನಾಳೆ, ಗುಂಡಪ್ಪಾ ಬೂರ್ಕೆ, ಶಾಂತಪ್ಪಾ ಕುಂಬಾರ ಇದ್ದರು.
ಗುರು ಪಂಡರಗೆ ಸ್ವಾಗತಿಸಿದರು. ರೇವಣಸಿದ್ದ ಜಾಡರ್ ನಿರೂಪಿಸಿದರು.
ಮಹೇಶ ಎಳಗುತ್ತಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.