ADVERTISEMENT

ಕಾಡಾನೆ ದಾಳಿ: ಲಕ್ಷಾಂತರ ಮೌಲ್ಯದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 9:42 IST
Last Updated 18 ಜನವರಿ 2018, 9:42 IST
ಬಾಳೆಹೊನ್ನೂರು ಸಮೀಪದ ಚಿಕ್ಕಗ್ರಹಾರದ ಬಳಿ ಆನೆಗಳ ದಾಳಿಯಿಂದ ನಾಶಗೊಂಡ ಬೆಳೆ.
ಬಾಳೆಹೊನ್ನೂರು ಸಮೀಪದ ಚಿಕ್ಕಗ್ರಹಾರದ ಬಳಿ ಆನೆಗಳ ದಾಳಿಯಿಂದ ನಾಶಗೊಂಡ ಬೆಳೆ.   

ಚಿಕ್ಕಗ್ರಹಾರ (ಬಾಳೆಹೊನ್ನೂರು): ಇಲ್ಲಿನ ರೈತರ ಜಮೀನಿಗೆ ಮೂರು ಕಾಡಾನೆಗಳು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.

ಆಡುವಳ್ಳಿ ಸಮೀಪದ ಚಿಕ್ಕಗ್ರಹಾರದ ಸರ್ವೇ ನಂ 314ರಲ್ಲಿ ಸಿ.ಕೆ.ಲಕ್ಷ್ಮಣಗೌಡ ಮತ್ತು ಸಿ.ಕೆ.ಚೆನ್ನಪ್ಪಗಗೌಡ ಎಂಬುವವರಿಗೆ ಸೇರಿದ ಜಮೀನಿಗೆ ಕಳೆದ ಒಂದು ವಾರದಿಂದ ಮೂರು ಕಾಡಾನೆಗಳು ದಾಳಿ ನಡೆಸುತ್ತಿದ್ದು ಫಸಲು ಭರಿತ ಅಡಿಕೆ,ಕಾಫಿ ಗಿಡಗಳನ್ನು ನಾಶಪಡಿಸುತ್ತಿವೆ ಎಂದು ಅವರು ದೂರಿದ್ದಾರೆ.

ಸುಮಾರು 100ಕ್ಕೂ ಅಧಿಕ ಅಡಿಕೆ ಮರಗಳು ಹಾಗೂ 60ಕ್ಕೂ ಅಧಿಕ ಕಾಫಿ ಗಿಡಗಳನ್ನು ಆನೆಗಳು ನಾಶಗೊಳಿಸಿವೆ. ಒಂದು ಮರಿಯಾನೆ ಹಾಗೂ ಎರಡು ದೊಡ್ಡ ಆನೆಗಳ ದಂಡು ಒಂದು ವಾರದಿಂದ ನಿತ್ಯ ಕೃಷಿ ಪ್ರದೇಶದೊಳಗೆ ಪ್ರವೇಶಿಸುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ADVERTISEMENT

ಸ್ಥಳಕ್ಕೆ ಚಿಕ್ಕಗ್ರಹಾರದ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಆನೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.