ADVERTISEMENT

ಬೆಳಮಗಿ: ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್‌ಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 6:34 IST
Last Updated 2 ಜನವರಿ 2018, 6:34 IST

ಆಳಂದ: ತಾಲ್ಲೂಕಿನ ಬೆಳಮಗಿಯಲ್ಲಿ ಭಾನುವಾರ ರಾತ್ರಿ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕಿಡಿಗೇಡಿ ಯುವಕರ ಗುಂಪು ಗ್ರಾಮದ ಸಮುದಾಯ ಭವನದಲ್ಲಿದ್ದ ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್‌ಗೆ ಸೆಗಣಿ ಬಳಿದು ಅವಮಾನ ಮಾಡಿದೆ.

ಗ್ರಾಮದ ಏಳು ಜನ ಆರೋಪಿಗಳು ಮದ್ಯ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಿಪಿಐ ಎಚ್‌.ಬಿ.ಸಣ್ಣಮನಿ, ಪಿಎಸ್ಐ ಸುರೇಶಬಾಬು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಘಟನೆ ಖಂಡಿಸಿ ತಾಲ್ಲೂಕಿನ ದಲಿತಪರ ಸಂಘಟನೆಗಳು ದಿನವಿಡೀ ಗ್ರಾಮದ ಮುಖ್ಯರಸ್ತೆ ಮೇಲೆ ಪ್ರತಿಭಟನೆ ನಡೆಸಿದವು. ‘ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಅಂಬಾರಾಯ ಬೆಳಮಗಿ, ಅಫ್ಜಲ್ ಅನ್ಸಾರಿ, ಶಿವಪುತ್ರ ನಡಗೇರಿ, ಧರ್ಮಾ ಬಂಗರಗಾ, ರಾಜಕುಮಾರ ಮುದಗಲೆ, ಮಹೇಶ ತಡಕಲ, ಗೋರಖನಾಥ ದೊಡ್ಡಮನಿ, ಸೂರ್ಯಕಾಂತ ಜಿಡಗಾ, ಹಣಮಂತ ಬೆಳಮಗಿ, ಚಿರಂಜೀವಿ ಬೆಳಮಗಿ, ಮಿಥುನ್‌ ಝಳಕಿ, ಅಶೋಕ ಸುತಾರ, ಫಾರೂಖ್ ಮಟಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.