ADVERTISEMENT

‘ಸರಳ ವಿವಾಹ ಸುಂದರ ವೈವಾಹಿಕ ಜೀವನಕ್ಕೆ ನಾಂದಿ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 7:19 IST
Last Updated 6 ನವೆಂಬರ್ 2017, 7:19 IST

ಶನಿವಾರಸಂತೆ: ಸರಳ ವಿವಾಹ ಸುಂದರ ವೈವಾಹಿಕ ಜೀವನಕ್ಕೆ ನಾಂದಿ. ಸರಳತೆಯಿಂದ ಬದುಕಿದಲ್ಲಿ ನೆಮ್ಮದಿ ಮೂಡಲಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ಜೈಭೀಮ್ ಸಿದ್ಧಾರ್ಥ ಹೋಬಳಿ ಘಟಕದಿಂದ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಸಮಾರಂಭ ಉದ್ಘಾ ಟಿಸಿದರು. ಶನಿವಾರಸಂತೆಯ ವಿಘ್ನೇಶ್ವರ ವಿದ್ಯಾಸಂಸ್ಥೆಯ ಉಪನ್ಯಾಸಕ ಕೆ.ಪಿ. ಜಯಕುಮಾರ್ ನೂತನ ವಧುವರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಹೇಮರಾಜ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾಸುಂದರ್, ಪ್ರಮುಖರಾದ ಡಿ.ಸಿ.ನಿರ್ವಾಣಪ್ಪ, ಎಸ್.ಎಸ್.ಶಿವಶಂಕರ್, ಟಿ.ಈ.ಸುರೇಶ್ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.