ADVERTISEMENT

ಜನ, ಜಾನುವಾರುಗಳಿಗೆ ಉಚಿತ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:00 IST
Last Updated 25 ಮೇ 2017, 5:00 IST
ಜನ, ಜಾನುವಾರುಗಳಿಗೆ ಉಚಿತ ಕುಡಿಯುವ ನೀರು
ಜನ, ಜಾನುವಾರುಗಳಿಗೆ ಉಚಿತ ಕುಡಿಯುವ ನೀರು   

ಶ್ರೀನಿವಾಸಪುರ: ತಾಲ್ಲೂಕಿನ ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಕಾರ್ಯದರ್ಶಿ ಕೃಷ್ಣಾರೆಡ್ಡಿ ಸಿ.ಹೊಸೂರು ಗ್ರಾಮದ ಜನ, ಜಾನುವಾರುಗಳಿಗೆ ಅಗತ್ಯವಾದ ಕುಡಿಯುವ ನೀರನ್ನು ಉಚಿತವಾಗಿ ಪೂರೈಸುತ್ತಿದ್ದು ಮೆಚ್ಚುಗೆ ಗಳಿಸಿದ್ದಾರೆ.

ಗ್ರಾಮದಲ್ಲಿನ ತಮ್ಮ ಮನೆಯ ಮುಂಭಾಗ ಸಿಸ್ಟಿನ್‌ ಹಾಗೂ ತೊಟ್ಟಿ ನಿರ್ಮಿಸಿ ದಾಹ ನೀಗಿಸುತ್ತಿದ್ದಾರೆ. ಗ್ರಾಮದ ಸುತ್ತ ಮುತ್ತ ಯಾವುದೇ ಕೆರೆ ಅಥವಾ ಕುಂಟೆಯಲ್ಲಿ ನೀರು ಇಲ್ಲ. ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿತ್ತು.

ಸಮಸ್ಯೆ ಅರಿತ ಕೃಷ್ಣಾರೆಡ್ಡಿ ತಮ್ಮ ಸ್ವಂತ ಕೊಳವೆ ಬಾವಿಯಿಂದ ನೀರು ಒದಗಿಸುತ್ತಿದ್ದಾರೆ. ಅವರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT