ADVERTISEMENT

ಸ್ವಾಭಿಮಾನ ಕಸಿದುಕೊಂಡ ಕಾಂಗ್ರೆಸ್: ಸಂಗಣ್ಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 5:56 IST
Last Updated 20 ಸೆಪ್ಟೆಂಬರ್ 2017, 5:56 IST

ಕೊಪ್ಪಳ: ನರೇಂದ್ರ ಮೋದಿ ಅವರಂತೆ ಗ್ರಾಮಗಳನ್ನು ತಲುಪಿದ ಯಾವ ಪ್ರಧಾನಿಯೂ ಇಲ್ಲ. ಗ್ರಾಮ ಭಾರತ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಎಂದು ಹಲವು ಜನಪರ ಕೆಲಸಗಳನ್ನು ಅವರು ರೂಪಿಸಿ, ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳ ತಾಲ್ಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ನಂದಿಬಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಗೊಂಡಬಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬೂತ್ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿಯವರು ದೆಹಲಿಯಲ್ಲಿದ್ದರೂ ಕೊಪ್ಪಳದಂತಹ ದೂರದ ಜಿಲ್ಲೆಯ ಹಳ್ಳಿಹಳ್ಳಿಗೂ ಹತ್ತಿರವಾಗಿದ್ದಾರೆ. ಆದರೆ, ಹತ್ತಿರದ ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರ ದೂರವಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಮತ್ತು ಶಾಸಕರ ಸ್ವಾರ್ಥ ರಾಜಕಾರಣವೇ ಕಾರಣ. ಕೊಪ್ಪಳ ಏತ ನೀರಾವರಿಯಂತಹ ಮಹತ್ವದ ಹಾಗೂ ಉಪಯುಕ್ತ ಯೋಜನೆಯನ್ನು ಕಡೆಗಣಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ ಎಂದು ಟೀಕಿಸಿದರು.

ADVERTISEMENT

ಗ್ರಾಮೀಣ ಮಂಡಲ ಅಧ್ಯಕ್ಷ ತೋಟಪ್ಪ ಕಾಮನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕವಲೂರ, ಮುಖಂಡರಾದ ಅಪ್ಪಣ್ಣ ಪದಕಿ, ಅಮರೇಶ ಕರಡಿ, ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ನಾಗನಗೌಡ ಮಾಲಿಪಾಟೀಲ, ರಾಷ್ಟೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ, ತಾ.ಪಂ ಸದಸ್ಯ ಕರಿಯಪ್ಪ ಗೂಗಿಮರಿ, ಚಂದ್ರಕಾಂತ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.