ADVERTISEMENT

‘ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:15 IST
Last Updated 24 ಡಿಸೆಂಬರ್ 2017, 5:15 IST

ದೇವದುರ್ಗ: ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಇಂತಹ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ರಾಯಚೂರಿನ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಾಗಡದಿನ್ನಿ ಗ್ರಾಮ ಪಂಚಾಯಿತಿಯ ಯರಮರಸ್‌ ಗ್ರಾಮದ ವೀರಭದ್ರಯ್ಯ ತಾತನವರ 31ನೇ ಪುಣ್ಯತಿಥಿ ಪ್ರಯುಕ್ತ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಧರ್ಮ ಉಳಿದಿದ್ದರೆ ಅದು ಮಠಗಳಿಂದ ಸಾಧ್ಯ. ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತ ಧರ್ಮವನ್ನು ಎರಡು ಭಾಗಗಳಾಗಿ ಮಾಡಲು ಮುಂದಾಗಿದ್ದಾರೆ ಅಂಥವರಿಗೆ ಕಾಲವೇ ಉತ್ತರ ನೀಡುತ್ತದೆ’ ಎಂದರು. ಸಾಮೂಹಿಕ ವಿವಾಹದಂತ ಸಾಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಠಗಳಿಗೆ ಶ್ರೀಮಂತರು ಸಹಾಯ ಮಾಡಬೇಕು ಎಂದರು.

ADVERTISEMENT

ನವಲಕಲ್ ಬೃಹನ್ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಮಠಧ ಪಂಚಾಕ್ಷರಿ ಸ್ವಾಮೀಜಿ, ಅಡವಿಶ್ವರ ಮಠದ ಕಲ್ಲೂರು ಶಂಭುಲಿಂಗ ಸ್ವಾಮೀಜಿ, ಮುಕ್ಕಂದಿ ಮಠದ ಶಾಶ್ವತಯ್ಯಸ್ವಾಮಿ, ಚರಬಸಯ್ಯ ತಾತ ಜಾಗಟಗಲ್‌, ಬೆಟ್ಟಪ್ಪಯ್ಯ ತಾತ ಜಾಗಟಗಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.