ADVERTISEMENT

ಕನಕಪುರ 20 ಬಿಜೆಪಿ ಕಾರ್ಯಕರ್ತರ ಸೆರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 9:03 IST
Last Updated 6 ಸೆಪ್ಟೆಂಬರ್ 2017, 9:03 IST
ಕನಕಪುರದಲ್ಲಿ ಬೈಕ್‌ ರ್‍ಯಾಲಿಗೆ ತೆರಳುತ್ತಿದ್ದ ಬಿ.ಜೆ.ಪಿ. ಮುಖಂಡರನ್ನು ಪೊಲೀಸರು ಬಂಧಿಸಿದರು
ಕನಕಪುರದಲ್ಲಿ ಬೈಕ್‌ ರ್‍ಯಾಲಿಗೆ ತೆರಳುತ್ತಿದ್ದ ಬಿ.ಜೆ.ಪಿ. ಮುಖಂಡರನ್ನು ಪೊಲೀಸರು ಬಂಧಿಸಿದರು   

ಕನಕಪುರ: ಮಂಗಳೂರು ಚಲೋ ಬೈಕ್‌ ರ್‍ಯಾಲಿಗೆ ತೆರಳುತ್ತಿದ್ದ ಬಿ.ಜೆ.ಪಿ. ಮುಖಂಡರನ್ನು ಪೊಲೀಸರು ತಡೆದು ಬಂಧಿಸಿದ ಘಟನೆ ನಗರದ ಚನ್ನಬಸಪ್ಪ ವೃತ್ತದಲ್ಲಿ ಮಂಗಳವಾರ ನಡೆಯಿತು.

ತಾಲ್ಲೂಕಿನ ವಿವಿಧ ಭಾಗದಿಂದ ಸುಮಾರು 20 ಮಂದಿ ಬಿ.ಜೆ.ಪಿ. ಮುಖಂಡರು ಬೈಕ್‌ಗಳಲ್ಲಿ ಘೋಷಣೆ ಕೂಗುತ್ತಾ ನಗರದ ಚನ್ನಬಸಪ್ಪ ವೃತ್ತಕ್ಕೆ ಬಂದರು. ಆಗ ಪೊಲೀಸರು ಅವರನ್ನು ಬಂಧಿಸಿ ಮೀಸಲು ಪಡೆಯ ವಾಹನಕ್ಕೆ ತುಂಬಿಕೊಂಡರು.

ನಂತರ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಸಂಜೆವರೆಗೂ ವಶದಲ್ಲಿ ಇಟ್ಟುಕೊಂಡಿದ್ದು ಸಂಜೆಯ ನಂತರ ನಗರದ ಪೊಲೀಸ್‌ ಠಾಣೆಗೆ ಕರೆತಂದು ಮುಚ್ಚಳಿಕೆ ಬರೆಸಿ ಬಿಡಗಡೆಗೊಳಿಸಿದರು. ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಿಗನಹಳ್ಳಿ ಜಗನ್ನಾಥ್‌, ಕಾರ್ಯಕರ್ತರು ಬಂಧನಕ್ಕೆ ಒಳಗಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.