ADVERTISEMENT

ಚನ್ನಪಟ್ಟಣ: ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 11:14 IST
Last Updated 30 ನವೆಂಬರ್ 2015, 11:14 IST

ಚನ್ನಪಟ್ಟಣ: ‘ದೇಶದ ಪ್ರತಿಯೊಂದು ಮಗುವೂ  ಹೆಮ್ಮೆಯ ಪ್ರಜೆಯಾಗಬೇಕು’ ಎಂದು ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುದಗೆರೆ ಗ್ರಾಮದ ನಿಸರ್ಗ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಬ್ದುಲ್ ಕಲಾಂ ಸ್ಮರಣೆ, ಮಕ್ಕಳ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳಿಂದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಭಾರತದ ಕ್ಷಿಪಣಿ ಜನಕ ಡಾ.ಅಬ್ದುಲ್ ಕಲಾಂ ಅವರಂತೆ ಜೀವನೋತ್ಸಾಹ ರೂಢಿಸಿಕೊಳ್ಳಬೇಕು. ನಮ್ಮ ನೆಲ, ಜನ, ಭಾಷೆ, ಸಂಸ್ಕೃತಿಯ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಪ್ರದರ್ಶಿಸಲು ಶಾಲೆಗಳು ವೇದಿಕೆ ಒದಗಿಸಿಕೊಡಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.