ADVERTISEMENT

ಸಮುದಾಯ ಸೇವಾ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 9:04 IST
Last Updated 21 ಜುಲೈ 2017, 9:04 IST

ಕನಕಪುರ: ‘ರೋಟರಿ ಕ್ಲಬ್‌ ಸಾಮಾಜಿಕ ಕಾರ್ಯನಿರ್ವಹಿಸುವ ಸೇವಾ ಕ್ಲಬ್‌ ಆಗಿದ್ದು ವಾರ್ಷಿಕವಾಗಿ ಹಲವು ಜನಪರ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ’ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಂ.ಸುರೇಶ್‌ ಅಭಿಪ್ರಾಯಪಟ್ಟರು. ನಗರದ ರೋಟರಿ ಭವನದಲ್ಲಿ ಬುಧವಾರ ರಾತ್ರಿ ನಡೆದ ಪದವಿ ಸ್ವೀಕಾರ ಸಮಾರಂಭದಲ್ಲಿ ನೂತನ ಸಾಲಿನ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಸಂಸ್ಥೆಯ ಧ್ವಜ ನೀಡುವ ಮೂಲಕ ಕ್ಲಬ್‌ನ  ಜವಾ ಬ್ದಾರಿ ವಹಿಸಿಕೊಟ್ಟರು.

ನಂತರ ಮಾತನಾಡಿದ ಅವರು, ‘ಕ್ಲಬ್‌ನ ಸದಸ್ಯರ ಸಹಕಾರದೊಂದಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ಪ್ರತಿ ವರ್ಷ  ಗಿಡನೆಡುವ ಕಾರ್ಯಕ್ರಮ, ಆರೋಗ್ಯ ತಪಾಸಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಂತ ಮೌಲ್ಯಯುತ ಕಾರ್ಯಕ್ರಮ ಕ್ಲಬ್‌ ನಡೆಸಿಕೊಂಡು ಬರುತ್ತಿದೆ’ ಎಂದು ಹೇಳಿದರು. ಮುಂದೆಯೂ ಇದೇ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ ಕೊಂಡು ಬರಲಿ ಎಂದು ಶುಭ ಕೋರಿದರು.

ನಿರ್ಗಮಿತ ಕಾರ್ಯದರ್ಶಿ ದೊಡ್ಡ ಭೈರೇಗೌಡ ಮಾತನಾಡಿ, ‘ಡಯಾಲಿಸಿಸ್‌ ಉಂಟಾದವರಿಗೆ ಅನುಕೂಲವಾಗಲು ನಗರದ ಸಾರ್ವಜನಿಕ ಆಸ್ಪತ್ರೆಗೆ ಡಯಾ ಲಿಸಿಸ್‌ ಯಂತ್ರ ಕೊಡುಗೆಯಾಗಿ ನೀಡಲಾಯಿತು. ಮುಂದಿನ ಸಾಲಿನಲ್ಲಿ ಉತ್ತಮ ಕಾರ್ಯಕ್ರಮ ರೂಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವು ದೆಂದು’ಹೇಳಿದರು.

ADVERTISEMENT

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯ ನಿರ್ದೇ ಶಕರ ಆಪ್ತ ಕಾರ್ಯದರ್ಶಿ ವೀಣಾದೇವಿ ಎಸ್.ಮೆಳಹಳ್ಳಿ ಅವರಿಗೆ ವೃತ್ತಿ ಸೇವಾ ಪುರಸ್ಕಾರ ನೀಡಲಾಯಿತು. ಜಿಲ್ಲಾ ಸಹಪಾಲಕ ಸತೀಶ್ ಮಾ ನಂದಿ, ಜಿಲ್ಲಾ ಕಾರ್ಯದರ್ಶಿ ನಾಗೇಂದ್ರಪ್ರಸಾದ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.