ADVERTISEMENT

ಇಂದಿನಿಂದ ರೈತರಿಗೆ ಉಚಿತ ತರಬೇತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 4:36 IST
Last Updated 22 ಸೆಪ್ಟೆಂಬರ್ 2017, 4:36 IST

ತುಮಕೂರು: ರಾಷ್ಟ್ರೀಯ ಜಾನುವಾರು ಅಭಿಯಾನ ಯೋಜನೆ ಅಡಿಯಲ್ಲಿ ಆಸಕ್ತ ರೈತರಿಗೆ ಗುರುವಾರದಿಂದ (ಸೆ.21) ಮೂರು ದಿನಗಳ ಕಾಲ ಕುರಿ ಮತ್ತು ಮೇಕೆ ಸಾಕಾಣಿಕೆಯ ಉಚಿತ ತರಬೇತಿ ನೀಡಲಾಗುತ್ತದೆ.

ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ತರಬೇತಿ ಪ್ರಾರಂಭವಾಗುವುದು. ಮೊದಲು ಬಂದ 50 ಜನ ಆಸಕ್ತ ರೈತರಿಗೆ ಮಾತ್ರ ತರಬೇತಿಗೆ ಪರಿಗಣಿಸಲಾಗುತ್ತದೆ.

ಆಸಕ್ತ ರೈತರು ಆಧಾರ್‌ ನಕಲು ಪ್ರತಿ, ಬ್ಯಾಂಕ್‌ ಉಳಿತಾಯ ಖಾತೆ, 2 ಭಾವಚಿತ್ರ ಮತ್ತು ಪರಿಶಿಷ್ಟ ಜಾತಿ, ಪಂಗಡ ಪ್ರಮಾಣ ಪತ್ರ ತೆಗೆದುಕೊಂಡು ತರಬೇತಿಗೆ ಹಾಜರಾಗಬೇಕು.

ADVERTISEMENT

ಹೆಚ್ಚಿನ ಮಾಹಿತಿಗೆ ದೂ. 0816–2251214 ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.