ADVERTISEMENT

ಎಂಡೋಸಲ್ಫಾನ್: ವೈದ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 5:18 IST
Last Updated 20 ಅಕ್ಟೋಬರ್ 2014, 5:18 IST

ಉಡುಪಿ: ಎಂಡೊ ಪೀಡಿತರ ಸಮೀಕ್ಷೆ ವೇಳೆ ಹಾಜ­ರಾಗಲು ಸಾಧ್ಯವಾಗದೆ ಪಟ್ಟಿಯಲ್ಲಿ ಹೆಸರು ತಪ್ಪಿ ಹೋಗಿ­ರುವ ಈ ಕೆಳಕಂಡ ಗ್ರಾಮಗಳ ಅರ್ಹರು ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಕ್ಟೋಬರ್‌ 21ರಂದು ಬೆಳಿಗ್ಗೆ 10ಗಂಟೆಯಿಂದ 1 ರವರೆಗೆ ನಡೆ­ಯುವ ತಪಾಸಣಾ ಶಿಬಿರಕ್ಕೆ ಹಾಜರಾಗಬಹುದು ಎಂದು  ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಕಾರ್ಕಳ ತಾಲ್ಲೂಕಿನ ಮಿಯಾರು, ಸಾಣೂರು, ಇರ್ವತ್ತೂರು, ಕೌಡೂರು, ಶಿರ್ಲಾಲು, ಕೆರ್ವಾಶೆ, ಕಾಂತಾವರ, ಕಡ್ತಲ, ಎಳ್ಳಾರೆ, ಈದು, ಕೆರೆಬೆಟ್ಟು, ಶಿವಪುರ ಹಾಗೂ ಅಂಡಾರು ಗ್ರಾಮಗಳ ವ್ಯಾಪ್ತಿಯ ಜನರು ಶಿಬಿರದಲ್ಲಿ ಭಾಗವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.