ADVERTISEMENT

‘ಈ ದಿಲ್’ಗೆ ಕಾಳಿಸ್ವಾಮಿ ನೃತ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

‘ಲವ್ ಮಾಡಿ ಓಡೋಗ್ಬೇಡಿ’ ಎಂಬ ಹಾಡಿಗೆ ರಿಷಿಕುಮಾರಸ್ವಾಮಿ (ಕಾಳಿಸ್ವಾಮಿ) ಹಾಗೂ ಅವಿನಾಶ್ ಹೆಜ್ಜೆ ಹಾಕಿದ ಚಿತ್ರೀಕರಣ ಈಚೆಗೆ ರೆಸಾರ್ಟ್‌ನಲ್ಲಿ ನಡೆಯಿತು. ಎಸ್. ಶ್ರೀಧರ್ ನಿರ್ಮಾಣದ ‘ಈ ದಿಲ್ ಹೇಳಿದೆ ನೀ ಬೇಕೆಂತ’ ಚಿತ್ರಕ್ಕೆ ನಾಗೇಶ್ ನೇತೃತ್ವದಲ್ಲಿ ಇಬ್ಬರೂ ಹೆಜ್ಜೆ ಹಾಕಿದರು.

ಚಿತ್ರಕಥೆ, ಸಂಭಾಷಣೆ ಬರೆದಿರುವ ಕೆ.ಟಿ.ಎಂ. ಶ್ರೀನಿವಾಸ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಎಚ್.ಕೆ.ಚಿದಾನಂದ್ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ಅವಿನಾಶ್ ನರಸಿಂಹರಾಜು, ಶ್ರೀಶ್ರುತಿ, ಮಿತ್ರಾ, ಸುರೇಶ್ ಮಂಗಳೂರು, ನಾಗೇಂದ್ರ ಷಾ, ವಿದ್ಯಾಮೂರ್ತಿ, ಕುಮುದ ಇತರರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.