ADVERTISEMENT

‘ಕಿರಗೂರಿನ ಗಯ್ಯಾಳಿಗಳು’ ಚಿತ್ರಕ್ಕೆ ಸಂಕಲನ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2015, 19:30 IST
Last Updated 29 ಡಿಸೆಂಬರ್ 2015, 19:30 IST

ಮೇಘ ಮೂವೀಸ್ ಲಾಂಛನದಲ್ಲಿ ಸುಮನಾ ಕಿತ್ತೂರು ಹಾಗೂ ರವೀಂದ್ರ ನಿರ್ಮಿಸುತ್ತಿರುವ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರಕ್ಕೆ ಗೌತಮ್ ವಿಜನ್‌ನಲ್ಲಿ ಸಂಕಲನ ನಡೆಯುತ್ತಿದೆ. ಸುರೇಶ್ ಅರಸ್ ಈ ಚಿತ್ರದ ಸಂಕಲನಕಾರರು.

ಸುಮನಾ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಮತ್ತು ಸುಮನಾ ಕಿತ್ತೂರು ಬರೆದಿದ್ದಾರೆ. ಸಾಧುಕೋಕಿಲ ಅವರು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.

ಶ್ವೇತಾ ಶ್ರೀವಾಸ್ತವ್, ಯೋಗೀಶ್(ಲೂಸ್‌ಮಾದ), ಅಜಯ್‌ರಾವ್, ಕಿಶೋರ್, ಸುಕೃತಾ ವಾಗ್ಲೆ, ಸೋನು ಗೌಡ, ಕಾರುಣ್ಯರಾಮ್, ಅಚ್ಯುತಕುಮಾರ್, ಶರತ್ ಲೋಹಿತಾಶ್ವ, ಸುಂದರ್, ಎಸ್.ನಾರಾಯಣ್, ಗಿರಿಜಾ ಲೋಕೇಶ್, ಲಕ್ಷ್ಮೀ ಚಂದ್ರಶೇಖರ್, ರವಿಶಂಕರ್ ಗೌಡ, ಅನಂತವೇಲು, ರಾಹುಲ್ ಮಾಧವನ್, ನಿಖಿಲ್ ಮಂಜು, ಶಾಂತಾ ಆಚಾರ್ಯ, ಶೊಭ್‌ರಾಜ್, ಮಂಡ್ಯ ರಮೇಶ್, ಧರ್ಮ, ಕೆ.ಎಸ್.ಡಿ.ಎಲ್ ಚಂದ್ರು, ಸಂಪತ್‌ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.