ಭುವನೇಶ್ವರ (ಐಎಎನ್ಎಸ್): ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಮಧ್ಯಂತರಗಾಮಿ ಆಕಾಶ್ ಕ್ರಿಪಣಿಯ ಪರೀಕ್ಷಾರ್ಥ ಪ್ರಯೋಗ ಗುರುವಾರ ಇಲ್ಲಿಯ ರಕ್ಷಣಾ ನೆಲೆಯಲ್ಲಿ ಯಶಸ್ವಿಯಾಗಿ ನಡೆದಿದೆ.
ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ 27 ಕಿ.ಮೀ. ದೂರ ಸಾಗಬಲ್ಲ (15 ಕಿ.ಮೀ. ಖಚಿತ ಗುರಿ) ಈ ಕ್ಷಿಪಣಿಯನ್ನು ಬಾಲಾಸೋರ್ ಜಿಲ್ಲೆಯ ಚಂಡೀಪುರ ಪರೀಕ್ಷಾ ವಲಯದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
ಹಲವು ಬಾರಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಈಗ ಭಾರ ತೀಯ ವಾಯುಪಡೆ ಪರೀಕ್ಷೆ ನಡೆಸಿದೆ ಎಂದು ಪರೀಕ್ಷಾ ವಲಯದ ನಿರ್ದೇಶಕ ಎಂ.ವಿ.ಕೆ.ವಿ. ಪ್ರಸಾದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.