ADVERTISEMENT

ಆಶ್ರಮದಲ್ಲಿ ಲಾಠಿ, ಖಾರದಪುಡಿ, ಕಲ್ಲು, ಹೆಲ್ಮೆಟ್‌!

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

ಹಿಸ್ಸಾರ್‌ (ಪಿಟಿಐ): ಬರ್ವಾಲಾ ಪಟ್ಟಣದ 12 ಎಕರೆ ವಿಸ್ತೀರ್ಣದ ರಾಮ್‌ಪಾಲ್‌ ಆಶ್ರಮದಲ್ಲಿ ಸಂಗ್ರಹಿಸಿ ಇಡಲಾಗಿದ್ದ  15 ಲಾಠಿ, ಮೂರು ಕೆ.ಜಿ. ಖಾರದಪುಡಿ, 12 ಹೆಲ್ಮೆಟ್‌ ಹಾಗೂ 500 ಚಿಕ್ಕ ಗಾತ್ರದ ಕಲ್ಲುಗಳನ್ನು ಹರಿಯಾಣ ಪೊಲೀಸರ ವಿಶೇಷ ತನಿಖಾ ತಂಡ ವಶಪಡಿಸಿಕೊಂಡಿದೆ.

ತನಿಖಾ ತಂಡ ಆಶ್ರಮವನ್ನು  ಜಾಲಾಡುತ್ತಿದ್ದು ಇನ್ನೂ ಕೆಲವು ದಿನಗಳ ಕಾಲ ತಪಾಸಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಪೊಲೀಸರೊಂದಿಗೆ ಕಾದಾಟಕ್ಕಿ­ಳಿದ ರಾಮ್‌ಪಾಲ್‌ ಪ್ರಮುಖ ಬಂಟ­ರನ್ನು  ಸ್ಥಳೀಯ ನ್ಯಾಯಾಲಯ ಎರಡು ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.