ADVERTISEMENT

ಕರಣ್‌ ಜೋಹರ್‌ ಹೇಳಿಕೆಗೆ ಎಂಎನ್‌ಎಸ್‌ ಪ್ರತಿಭಟನೆ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಕರಣ್‌ ಜೋಹರ್‌ ಹೇಳಿಕೆಗೆ ಎಂಎನ್‌ಎಸ್‌ ಪ್ರತಿಭಟನೆ
ಕರಣ್‌ ಜೋಹರ್‌ ಹೇಳಿಕೆಗೆ ಎಂಎನ್‌ಎಸ್‌ ಪ್ರತಿಭಟನೆ   

ಮುಂಬೈ (ಪಿಟಿಐ): ಪಾಕ್‌ ಕಲಾವಿದರಿಗೆ ಬೆಂಬಲ ಸೂಚಿಸಿರುವು ದನ್ನು ವಿರೋಧಿಸಿ ಚಲನಚಿತ್ರ ನಿರ್ಮಾಪಕ ಕರಣ್‌ ಜೋಹರ್‌ ಅವರ ಪ್ರೊಡಕ್ಷನ್ ಕಚೇರಿ ಮುಂದೆ ಎಂಎನ್‌ಎಸ್‌ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ 15 ಕಾರ್ಯ ಕರ್ತರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂಧಿಸಿದರು.

ಪಾಕಿಸ್ತಾನದ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರುವುದ ರಿಂದ ಭಯೋತ್ಪಾದನೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ಕರಣ್‌ ಜೋಹರ್‌ ಹೇಳಿಕೆ ನೀಡಿದ್ದರು.

ಜೋಹರ್‌ ವಿರುದ್ಧ ನಡೆಸಿದ ಪ್ರತಿಭಟನೆಯನ್ನು ಸಮರ್ಥಿಸಿ ಕೊಂಡಿರುವ ಎಂಎನ್‌ಎಸ್‌ ಪ್ರಧಾನ ಕಾರ್ಯದರ್ಶಿ ಶಾಲಿನಿ ಠಾಕ್ರೆ, ಜೊಹರ್‌ ಅವರ ‘ಏ ದಿಲ್‌ ಹೈ ಮುಷ್ಕಿಲ್‌’ ಚಲನಚಿತ್ರ ಬಿಡುಗಡೆಗೆ ಅವಕಾಶ  ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಜೊಹರ್‌ ಅವರ ಹೇಳಿಕೆ ಅಪ್ರಬುದ್ಧತೆ ಮತ್ತು ಪೊಳ್ಳುತನದಿಂದ ಕೂಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.