ADVERTISEMENT

ಕಲೆಯ ಮೂಲಕ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:34 IST
Last Updated 14 ಸೆಪ್ಟೆಂಬರ್ 2014, 19:34 IST

ಪ್ರಕೃತಿ ಮುನಿಸಿಕೊಂಡಿದೆ. ಸೌಂದರ್ಯದ ಖನಿ ಜಮ್ಮು ಮತ್ತು ಕಾಶ್ಮೀರ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಹಸಿರಿನ ಸರದೌತಣ ಉಣಬಡಿಸುವ ನಾಡಿನಲ್ಲಿ ಅನುರಣಿಸುತ್ತಿರುವ ನೋವು, ಅಳಲಿನ ಆಕ್ರಂದನ ದೇಶದ ಅಂತಃಕರಣವನ್ನು ತಟ್ಟಿದೆ. ಆಹಾರ, ಆಶ್ರಯ ಹಾಗೂ ಜೀವ ಜಲಕ್ಕಾಗಿ ಮೊರೆಯಿಡುತ್ತಿರುವ ಸಂತ್ರಸ್ತರಿಗೆ 'ನೆರವು ನೀಡಲು ಕೈ ಜೋಡಿಸಿ' ಎಂಬ ಸಂದೇಶ ಸಾರುವ ಕಲಾಕೃತಿಯನ್ನು ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲು ತೀರದಲ್ಲಿ ಭಾನುವಾರ ರಚಿಸಿದ ಬಗೆ... –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.