ನವದೆಹಲಿ: 2002 ಗುಜರಾತ್ ಕೋಮು ಗಲಭೆಯ ವೇಳೆ ವರದಿ ಮಾಡಲು ಹೋದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಅರ್ನಬ್ ಗೋಸ್ವಾಮಿ ಹೇಳಿದ್ದರು.ಆದರೆ ಇದೆಲ್ಲವೂ ಸುಳ್ಳು. ಅಂಥಾ ಘಟನೆ ನಡೆದೇ ಇಲ್ಲ ಎಂದು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಗಲಭೆ ವರದಿ ಮಾಡಲು ಹೋದಾಗ ಗುಜರಾತಿನಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಮನೆ ಬಳಿ ಗಲಭೆಕೋರರು ತನಗೆ ತಡೆಯೊಡ್ಡಿದ್ದರು ಎಂದು ಅರ್ನಬ್ ಎರಡು ವರ್ಷಗಳ ಹಿಂದೆ ಭಾಷಣವೊಂದರಲ್ಲಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.