ADVERTISEMENT

ದೇಶದ ಹಿತದೃಷ್ಟಿಯಿಂದ ಐಆರ್‌ಎಫ್‌ ನಿಷೇಧ ನಿರ್ಧಾರ: ದೆಹಲಿ ಹೈಕೋರ್ಟ್‌

ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌

ಏಜೆನ್ಸೀಸ್
Published 16 ಮಾರ್ಚ್ 2017, 18:02 IST
Last Updated 16 ಮಾರ್ಚ್ 2017, 18:02 IST
ದೇಶದ ಹಿತದೃಷ್ಟಿಯಿಂದ ಐಆರ್‌ಎಫ್‌ ನಿಷೇಧ ನಿರ್ಧಾರ: ದೆಹಲಿ ಹೈಕೋರ್ಟ್‌
ದೇಶದ ಹಿತದೃಷ್ಟಿಯಿಂದ ಐಆರ್‌ಎಫ್‌ ನಿಷೇಧ ನಿರ್ಧಾರ: ದೆಹಲಿ ಹೈಕೋರ್ಟ್‌   

ನವದೆಹಲಿ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ ಅವರ  ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಸಂಸ್ಥೆಯ ಮೇಲೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಮಾಡಿದೆ.

ದೇಶದ ರಕ್ಷಣೆ ಹಾಗೂ ಒಳಿತಿನ ದೃಷ್ಟಿಯಿಂದ ಸರ್ಕಾರ ಐಆರ್‌ಎಫ್‌ ನಿಶೇಧದ ನಿರ್ಧಾರ ತೆಗೆದುಕೊಂಡಿದೆ ಎಂದು ನ್ಯಾಯಾಮೂರ್ತಿ ಸಂಜೀವ್ ಸಚ್‌ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ಗೃಹ ಸಚಿವಾಲಯವು ಸಂಸ್ಥೆಯ ಚಟುವಟಿಕೆಗಳಿಗೆ ಸಂಬಂಧಿಸಿದ  ದಾಖಲೆಗಳನ್ನು ಸಲ್ಲಿಸಬೇಕೆಂದು ಹೇಳಿತ್ತು.

ADVERTISEMENT

ದೇಶದ ಯುವಕರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆಸಕ್ತಿ ತಳೆಯಬಹುದೆಂಬ ದೃಷ್ಟಿಯಿಂದ ಐಆರ್‌ಎಫ್ ಸಂಸ್ಥೆಯನ್ನು ನಿಷೇಧಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.