ADVERTISEMENT

ಮೇ 1 ರಿಂದ ಕೆಂಪು ದೀಪದ ವಾಹನ ಬಳಕೆ ನಿಷೇಧ

ಕೇಂದ್ರ ಸರ್ಕಾರ ಆದೇಶ

ಪಿಟಿಐ
Published 19 ಏಪ್ರಿಲ್ 2017, 9:53 IST
Last Updated 19 ಏಪ್ರಿಲ್ 2017, 9:53 IST
ಮೇ 1 ರಿಂದ ಕೆಂಪು ದೀಪದ ವಾಹನ ಬಳಕೆ ನಿಷೇಧ
ಮೇ 1 ರಿಂದ ಕೆಂಪು ದೀಪದ ವಾಹನ ಬಳಕೆ ನಿಷೇಧ   

ನವದೆಹಲಿ: ವಿಐಪಿ ಸಂಸ್ಕೃತಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಮುಂದಾಗಿರುವ ಕೇಂದ್ರ ಸರ್ಕಾರ ಮುಂಬರುವ ಮೇ 1ರಿಂದ ಕೆಂಪು ದೀಪದ ವಾಹನ ಬಳಕೆ ಮೇಲೆ ನಿಷೇಧವೇರಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಗಳು, ಲೋಕಸಭೆ ಸ್ಪೀಕರ್‌ ಮಾತ್ರ ಕೆಂಪು ದೀಪದ ವಾಹನ ಬಳಸಬಹುದಾಗಿದೆ.

ಉಳಿದಂತೆ ಕೇಂದ್ರ  ಮತ್ತು ರಾಜ್ಯಸರ್ಕಾರದ ಸಚಿವರುಗಳು ಮತ್ತು ಸರ್ಕಾರದ ಅಧಿಕಾರಿಗಳು ಕೆಂಪು ದೀಪದ ವಾಹನವನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ತುರ್ತು ಸೇವಾ ವಾಹನಗಳು, ಪೊಲೀಸ್‌, ಆ್ಯಂಬುಲೆನ್ಸ್‌, ಅಗ್ನಿಶಾಮಕ ವಾಹನಗಳಿಗೆ ವಿನಾಯ್ತಿ ನೀಡಲಾಗಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈಗಾಗಲೇ ದೆಹಲಿ, ಪಂಜಾಬ್‌, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೆಂಪು ದೀಪದ ವಾಹನ ಬಳಸುವುದನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.