ADVERTISEMENT

ಮೋದಿ ಉತ್ತಮ ನಾಯಕ: ಕರುಣಾನಿಧಿ

​ಪ್ರಜಾವಾಣಿ ವಾರ್ತೆ
Published 21 ಮೇ 2014, 11:25 IST
Last Updated 21 ಮೇ 2014, 11:25 IST

ಚೆನ್ನೈ (ಪಿಟಿಐ) : ‘ಅವಿರತ ಶ್ರಮ ಮತ್ತು ಅಪಾರ ಬುದ್ಧಿವಂತಿಕೆಯಿಂದ ದೇಶದಲ್ಲಿ ಉತ್ತಮ ನಾಯಕನಾಗುವ ಹಾದಿಯಲ್ಲಿ ನರೇಂದ್ರ ಮೋದಿ ಬೆಳೆಯುತ್ತಿವುದು ಶ್ಲಾಘನಾರ್ಹ’ ಎಂದು ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಬುಧವಾರ ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಬಿಜೆಪಿಯ ಭರ್ಜರಿ   ಗೆಲುವಿಗೆ ಕಾರಣರಾದ ಮೋದಿ ಅವರ ಗುಣಗಾನ ಮಾಡಿದರು.

’ಪ್ರಧಾನ ಮಂತ್ರಿಯಾಗಿ ದೇಶದ ಎಲ್ಲಾ ವರ್ಗದವರ ಮಹತ್ವಾಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಯಶಸ್ವಿಯಾಗುವಂತೆ ಪಕ್ಷದ ಪರವಾಗಿ  ಹಾರೈಸುತ್ತೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.