ಲಖನೌ (ಐಎಎನ್ಎಸ್): ‘ಭಾರತದ ಮುಸ್ಲಿಮರು ದೇಶಕ್ಕಾಗಿಯೇ ಬದುಕಿ ದೇಶಕ್ಕಾಗಿಯೇ ಸಾಯುತ್ತಾರೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಉತ್ತರಪ್ರದೇಶದ ಮುಸ್ಲಿಂ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಇಸಿಫಿ ಮಸೀದಿಯ ಇಮಾಮ್ ಮೌಲಾನಾ ಕಲ್ಬೆ ಜವ್ವದ್ ಅವರು ಪ್ರತಿಕ್ರಿಯಿಸಿ, ಮುಸಲ್ಮಾನರ ರಾಷ್ಟ್ರಪ್ರೇಮವನ್ನು
ಮಾಯಾವತಿ ಟೀಕೆ |
---|
ಲಖನೌ(ಪಿಟಿಐ): ಪ್ರಧಾನಿ ಹೇಳಿಕೆ ಕ್ಷುಲ್ಲಕ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಟೀಕಿಸಿದ್ದಾರೆ. |
ಪ್ರಧಾನಿಯವರು ಸಮರ್ಪಕವಾಗಿ ಅರ್ಥೈಸಿಕೊಂಡಿರುವ ಕಾರಣ ದೇಶದ ಮುಸ್ಲಿಮರು ಈಗ ನಿರಾಳವಾಗಿ ಉಸಿರಾಡಬಹುದು ಎಂದಿದ್ದಾರೆ.
ಪ್ರಧಾನಿ ಹೇಳಿಕೆಯ ಬಗ್ಗೆ ಸಂಶಯಪಡಬೇಕಾದ್ದು ಏನೂ ಇಲ್ಲ ಎಂದು ತೀಲಿ ವಾಲಿ ಮಸೀದಿಯ ಪಾದ್ರಿ ಮೌಲಾನಾ ಫಜ್ಲುಲ್ ರೆಹಮಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈಶ್ಬಾಗ್ ಈದ್ಗಾದ ಮುಖ್ಯಸ್ಥರಾದ ಮೌಲಾನಾ ಖಾಲಿದ್ ರಶೀದ್ ಫಾರಂಗಿ ಮಹಾಲಿ ಪ್ರತಿಕ್ರಿಯಿಸಿ, ಭಾರತದ ಮುಸಲ್ಮಾನರು ಸದಾ ದೇಶಕ್ಕೆ ನಿಷ್ಠರಾಗಿರುತ್ತಾರೆ. ಬಿಜೆಪಿ ನಾಯಕರು ಮುಸ್ಲಿಮರ ಮೇಲೆ ಆರೋಪ ಹೊರಿಸುತ್ತಿರುವುದನ್ನು ತಡೆಯಬೇಕು ಎಂದಿದ್ದಾರೆ.
ದೇವ್ಬಾದ್ ದಾರುಲ್ ಉಲೂಮ್ ಮೌಲಾನಾ ನಸೀಮ್ ಅಖ್ತರ್ ಶಾ ಕೈಸರ್ ಅವರೂ ಮೋದಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.