ADVERTISEMENT

ಯೋಗಿ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ಮುಲಾಯಂ, ಅಖಿಲೇಶ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 13:44 IST
Last Updated 19 ಮಾರ್ಚ್ 2017, 13:44 IST
ಯೋಗಿ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ಮುಲಾಯಂ, ಅಖಿಲೇಶ್
ಯೋಗಿ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ಮುಲಾಯಂ, ಅಖಿಲೇಶ್   

ಲಖನೌ: ಇಲ್ಲಿನ ಸ್ಮೃತಿ ಉಪವನ್‍ನಲ್ಲಿ ನಡೆದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಭಾಗಿಯಾಗಿದ್ದರು.

ಆದರೆ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು  ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ !

ಎಲ್ಲ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮೋದಿ ವೇದಿಕೆಯಿಂದ ಕೆಳಗಿಳಿಯಲು ಅಣಿಯಾಗುತ್ತಿದ್ದಂತೆ ಅವರನ್ನು ಅರೆಕ್ಷಣ ಹಿಡಿದು ನಿಲ್ಲಿಸಿದ ಮುಲಾಯಂ ಸಿಂಗ್ ಅಲ್ಲಿ ಹಸ್ತಲಾಘವ ಮಾಡಿದರು. ಆಮೇಲೆ ಇಬ್ಬರೂ ಆತ್ಮೀಯವಾಗಿ ಆಲಿಂಗನ ಮಾಡಿಕೊಂಡರು. ಎಲ್ಲರೂ ಅಚ್ಚರಿಯಿಂದ ನೋಡುತ್ತಿರುವಾಗಲೇ ಮುಲಾಯಂ, ಮೋದಿಯವರ ಕಿವಿಯಲ್ಲಿ ಏನೋ ಪಿಸುಗುಟ್ಟಿದರು.

ADVERTISEMENT

ನಗುತ್ತಾ ತಲೆಯಲ್ಲಾಡಿಸಿದ ಮೋದಿ ಆನಂತರ ಅಖಿಲೇಶ್ ಬಳಿ ಹೋಗಿ ಬೆನ್ನು ತಟ್ಟಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಅವರೇ ಹೈಲೈಟ್ ಆಗಬೇಕಿತ್ತು. ಆದರೆ ಮೋದಿ-ಅಖಿಲೇಶ್- ಮುಲಾಯಂ ಸಿಂಗ್ ಯಾದವ್ ಅವರ ಸಮಾಗಮ ಮತ್ತು ವೇದಿಕೆಯಲ್ಲಿನ ಆತ್ಮೀಯ ಕ್ಷಣಗಳು ಎಲ್ಲರ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.