ADVERTISEMENT

ಸಹಜ ಕಾರಣದಿಂದ ಲೋಯ ಸಾವು: ಸುಪ್ರೀಂ ಕೋರ್ಟ್‌

ಏಜೆನ್ಸೀಸ್
Published 20 ಏಪ್ರಿಲ್ 2018, 5:53 IST
Last Updated 20 ಏಪ್ರಿಲ್ 2018, 5:53 IST
ಸಹಜ ಕಾರಣದಿಂದ ಲೋಯ ಸಾವು: ಸುಪ್ರೀಂ ಕೋರ್ಟ್‌
ಸಹಜ ಕಾರಣದಿಂದ ಲೋಯ ಸಾವು: ಸುಪ್ರೀಂ ಕೋರ್ಟ್‌   

ನವದೆಹಲಿ: ಸಹಜ ಕಾರಣದಿಂದಾಗಿ ಸಿಬಿಐ ನ್ಯಾಯಾಧೀಶ ಬಿ.ಎಚ್‌.ಲೋಯ ಸಾವು ಸಂಭವಿಸಿದೆ ಎಂದಿರುವ ಸುಪ್ರೀಂ ಕೋರ್ಟ್‌, ಸಾವಿನ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ.

‘ನ್ಯಾಯಾಧೀಶ ಲೋಯ ಅವರ ಸಾವಿಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ಅಂತಿಮಗೊಳಿಸಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು’ ಎಂದು ಗುರುವಾರ ಕೋರ್ಟ್‌ ಹೇಳಿತು.

</p><p>ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ‘ಪಿಐಎಲ್‌ಗಳು ನ್ಯಾಯಾಲಯದ ಪ್ರಕ್ರಿಯೆ ಹಾಗೂ ಸಮಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.</p><p>ವೈಯಕ್ತಿಕ ಕಾರಣಗಳು ಹಾಗೂ ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಪಿಐಎಲ್‌ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಅಧಿಕಾರಿಗಳು ಹಾಗೂ ಬಾಂಬೆ ಹೈಕೋರ್ಟ್‌ ನ್ಯಾಯಾಧೀಶರ ಗೌರವಕ್ಕೆ ಧಕ್ಕೆ ಉಂಟು ಮಾಡಲು ಪಿಐಎಲ್‌ಗಳನ್ನು ಹಾಕಲಾಗಿದೆ ಎಂದಿದೆ.</p><p>ತ್ರಿಸದಸ್ಯ ಪೀಠವು ನ್ಯಾಯಮೂರ್ತಿ ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರನ್ನು ಒಳಗೊಂಡಿತ್ತು.</p><p>2005ರ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗಲೆ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಯಾಗಿದ್ದರು. ನ್ಯಾ.ಲೋಯ ಅವರ ನಂತರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದಿಂದ ಅಮಿತ್‌ ಶಾ ಅವರನ್ನು ಆರೋಪಮುಕ್ತ ಎಂದು ಘೋಷಿಸಿದ್ದರು.</p><p><strong>ಇನ್ನಷ್ಟು</strong>: <a href="http://www.prajavani.net/news/article/2017/11/24/535358.html" target="_blank">ನ್ಯಾಯಾಧೀಶರಿಗೆ ₹100 ಕೋಟಿ ಲಂಚದ ಆಮಿಷ ಆರೋಪ</a></p><p><a href="http://www.prajavani.net/news/article/2018/01/13/546895.html" target="_blank">‘ನ್ಯಾಯಾಧೀಶ ಲೋಯ ಸಾವು ಗಂಭೀರವಾದ ವಿಚಾರ’</a></p><p><a href="http://www.prajavani.net/news/article/2017/11/20/534548.html" target="_blank">ಸೊಹ್ರಾಬುದ್ದೀನ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ನಿಗೂಢ ಸಾವಿನ ಹಿಂದಿವೆ ಹಲವು ಪ್ರಶ್ನೆಗಳು</a></p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.