ಬಾಲಾಸೋರ್, ಒಡಿಶಾ (ಪಿಟಿಐ): ಸ್ವದೇಶಿ ನಿರ್ಮಿತ ಪಿನಾಕಾ ಕ್ಷಿಪಣಿಯನ್ನು ಗುರುವಾರ ಪ್ರಯೋಗಾರ್ಥವಾಗಿ ಉಡಾವಣೆ ನಡೆಸಲಾಗಿದ್ದು, ಯಶಸ್ವಿಯಾಗಿದೆ. ‘ಚಂಡಿಪುರದ ಪ್ರಾಯೋಗಿಕ ಕೇಂದ್ರದಿಂದ ಪಿನಾಕಾ ಕ್ಷಿಪಣಿಯನ್ನು ಮೂರು ಬಾರಿ ಪ್ರಯೋಗಾರ್ಥ ಉಡಾವಣೆ ಮಾಡಲಾಗಿದ್ದು, ಯಶಸ್ವಿಯಾಗಿದೆ’ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ರೈಲಿನಿಂದ ತಳ್ಳಿದ ಟಿಕೆಟ್ ತಪಾಸಕ
ಜಲಗಾಂವ್ (ಮಹಾರಾಷ್ಟ್ರ) (ಪಿಟಿಐ): ರೈಲು ಟಿಕೆಟ್ ತಪಾಸಕರೊಬ್ಬರು ಕುಡಿದ ಅಮಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಸಾಯಿಸಿರುವ ಘಟನೆ ಜಲಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಸಂಪತ್ ಸೋಲುಂಕೆ ಮಹಿಳೆಯನ್ನು ರೈಲಿನಿಂದ ಕೆಳಕ್ಕೆ ತಳ್ಳಿದ ಟಿಕೆಟ್ ತಪಾಸಕ ಎಂದು ಗುರುತಿಸಲಾಗಿದೆ.
‘ಸಾಮಾನ್ಯ ಟಿಕೆಟ್ ಪಡೆದಿದ್ದ ಮಹಿಳೆ ಹವಾನಿಯಂತ್ರಿತ ಬೋಗಿಗೆ ಹತ್ತಲು ಯತ್ನಿಸಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮೃತ ಮಹಿಳೆ ಉಜ್ವಲಾ ಪಾಂಡೆ (38) ಅವರ ಸೋದರಳಿಯ ದೂರು ದಾಖಲಿಸಿದ್ದು, ಟಿಕೆಟ್ ತಪಾಸಕರನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.