ಗ್ರಾಮೀಣ ಭಾರತದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಪಡೆಯುತ್ತಿರುವ 14–18 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಹಲವರು ‘ಕನಿಷ್ಠ ಸಾಕ್ಷರತಾ ಕೌಶಲ’ಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಂದರೆ ಈ ವಿದ್ಯಾರ್ಥಿಗಳು ದಿನನಿತ್ಯದ ಜೀವನಕ್ಕೆ ಅಗತ್ಯವಿರುವಷ್ಟು ಓದು, ಸರಳ ಲೆಕ್ಕಾಚಾರ, ಹಣ ಎಣಿಕೆಯನ್ನು ಸರಿಯಾಗಿ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ‘ಪ್ರಥಮ್’ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದವರೂ ಇದ್ದಾರೆ.
ಮಾತೃಭಾಷೆ
23.4% ಸ್ಪಷ್ಟವಾಗಿ, ಸರಾಗವಾಗಿ ಓದದವರು
76.6% ಸ್ಪಷ್ಟವಾಗಿ, ಸರಾಗವಾಗಿ ಓದಿದವರು
ಸರಳ ಭಾಗಾಕಾರ
56.9% ಸರಿಯಾಗಿ ಮಾಡದವರು
43.1% ಸರಿಯಾಗಿ ಮಾಡಿದವರು
ಇಂಗ್ಲಿಷ್
58.2% ಸ್ಪಷ್ಟವಾಗಿ ಓದಬಲ್ಲವರು
41.8% ಸ್ಪಷ್ಟವಾಗಿ ಓದದವರು
ಹಣ ಎಣಿಕೆ
75.7% ಸರಿಯಾಗಿ ಮಾಡಿದವರು
24.3% ತಪ್ಪಾಗಿ ಎಣಿಸಿದವರು
ತೂಕದ ಲೆಕ್ಕಾಚಾರ
55.7% ಸರಿ
44.3% ತಪ್ಪು
ಸಮಯ ಗುರುತಿಸುವಿಕೆ
ಗಂಟೆಗಳಲ್ಲಿ
82.7 % ಸರಿ
17.3% ತಪ್ಪು
ಗಂಟೆ ಮತ್ತು ನಿಮಿಷ
59.3% ಸರಿ
40.7% ತಪ್ಪು
–––––––––
ಶೇ 14ರಷ್ಟು ಮಂದಿ ದೇಶದ ನಕ್ಷೆ ಗುರುತಿಸಲಿಲ್ಲ
86% ದೇಶದ ನಕ್ಷೆ ಗುರುತಿಸಿದವರು
64% ದೇಶದ ರಾಜದನಿ ದೆಹಲಿ ಎಂದು ಉತ್ತರಿಸಿದವರು
79% ತಮ್ಮ ರಾಜ್ಯಗಳ ಹೆಸರನ್ನು ಸರಿಯಾಗಿ ಹೇಳಿದವರು
42% ಭಾರತದ ನಕ್ಷೆಯಲ್ಲಿ ತಮ್ಮ ರಾಜ್ಯದ ನಕ್ಷೆ ಗುರುತಿಸಿದವರು
––––––––––––––––
ಸಮೀಕ್ಷೆ ವಿವರ:
24 ರಾಜ್ಯಗಳು
28 ಜಿಲ್ಲೆಗಳು
1,641 ಹಳ್ಳಿಗಳು
25,000 ಮನೆಗಳು
30,000 ಸಮೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು
2,000 ಸಮೀಕ್ಷೆ ನಡೆಸಿದ ಸ್ವಯಂಸೇವಕರು
ಆಧಾರ: ಪ್ರಥಮ್ ಸ್ವಯಂಸೇವಾ ಸಂಸ್ಥೆಯ ‘ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ–2017 (ಗ್ರಾಮೀಣ ಭಾರತ)’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.