ADVERTISEMENT

ಅನಂತಕುಮಾರ್ ಹೆಗಡೆ ಸಚಿವರಷ್ಟೇ ಅಲ್ಲ, ಸಂಸದರಾಗಲೂ ನಾಲಾಯಕ್: ಸಿದ್ದರಾಮಯ್ಯ ತಿರುಗೇಟು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 11:54 IST
Last Updated 18 ನವೆಂಬರ್ 2017, 11:54 IST
ಅನಂತಕುಮಾರ್ ಹೆಗಡೆ ಸಚಿವರಷ್ಟೇ ಅಲ್ಲ, ಸಂಸದರಾಗಲೂ ನಾಲಾಯಕ್: ಸಿದ್ದರಾಮಯ್ಯ ತಿರುಗೇಟು
ಅನಂತಕುಮಾರ್ ಹೆಗಡೆ ಸಚಿವರಷ್ಟೇ ಅಲ್ಲ, ಸಂಸದರಾಗಲೂ ನಾಲಾಯಕ್: ಸಿದ್ದರಾಮಯ್ಯ ತಿರುಗೇಟು   

ದಾವಣಗೆರೆ: 'ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಚಿವರಷ್ಟೇ ಅಲ್ಲ, ಒಂದೇ ಒಂದು ಕ್ಷಣ ಸಂಸದ ಆಗಲೂ ನಾಲಾಯಕ್' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು.

‘ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೂಟು ನೆಕ್ಕಲು ಸಿದ್ಧವಾಗಿದ್ದಾರೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಅನಂತಕುಮಾರ್ ಹೆಗಡೆ ಅವರು ಶುಕ್ರವಾರ ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ನವ ಕರ್ನಾಟಕ ಪರಿವರ್ತನೆ ಯಾತ್ರೆಯಲ್ಲಿ ಟೀಕಿಸಿದ್ದಕ್ಕೆ ಸಿದ್ದರಾಮಯ್ಯ ಅವರು ಶನಿವಾರ ಪ್ರತಿಕ್ರಿಯಿಸಿದರು.

‘ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದರು.

ADVERTISEMENT

'ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಒಂದೇ ಒಂದು ಹಗರಣವನ್ನು ದಾಖಲೆ ಸಮೇತ ಯಾರಾದರೂ ಪ್ರಸ್ತುತ ಪಡಿಸಿದರೆ ಮುಂದೆ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.