ADVERTISEMENT

ಎಲ್ಲರೂ ಒಪ್ಪುವಂಥ ಭಾಷೆ ಸೃಷ್ಟಿಯಾಗಬೇಕು: ವೈದೇಹಿ

‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಬಹುಮಾನ ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 17:48 IST
Last Updated 14 ಅಕ್ಟೋಬರ್ 2017, 17:48 IST
ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಬಹುಮಾನ ವಿತರಣಾ ಸಮಾರಂಭದಲ್ಲಿ ಲೇಖಕಿ ವೈದೇಹಿ ಮಾತನಾಡಿದರು. ‘ಪ್ರಜಾವಾಣಿ’ಯ ಮುಖ್ಯ ಉಪ ಸಂಪಾದಕಿ ಶೈಲಜಾ ಹೂಗಾರ್‌, ಮಂಗಳೂರು ಬ್ಯೂರೋ ಮುಖ್ಯಸ್ಥ ಎಂ.ಜಿ. ಬಾಲಕೃಷ್ಣ ಮತ್ತು ಸಹ ಸಂಪಾದಕ ಎಂ. ನಾಗರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಬಹುಮಾನ ವಿತರಣಾ ಸಮಾರಂಭದಲ್ಲಿ ಲೇಖಕಿ ವೈದೇಹಿ ಮಾತನಾಡಿದರು. ‘ಪ್ರಜಾವಾಣಿ’ಯ ಮುಖ್ಯ ಉಪ ಸಂಪಾದಕಿ ಶೈಲಜಾ ಹೂಗಾರ್‌, ಮಂಗಳೂರು ಬ್ಯೂರೋ ಮುಖ್ಯಸ್ಥ ಎಂ.ಜಿ. ಬಾಲಕೃಷ್ಣ ಮತ್ತು ಸಹ ಸಂಪಾದಕ ಎಂ. ನಾಗರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಮಂಗಳೂರು: ‘ಭಾಷೆ ಕೆಟ್ಟು ಹೋಗುತ್ತಿದೆ. ಅದರ ಬಗೆಗಿನ ಸಂಕಟ ಯಾರ ಬಳಿ ಹೇಳಬೇಕು. ಅನಂತಮೂರ್ತಿ ಇದನ್ನೇ ಮಾತು‌ ಸೋಲುತ್ತಿದೆ ಎಂದಿದ್ದು. ಪರಸ್ಪರ‌ ಕೆರಳಿಸುವ ಭಾಷೆಯನ್ನೇ ಎಲ್ಲರೂ ಬಳಸುತ್ತಿದ್ದಾರೆ. ಎಲ್ಲರೂ ಒಪ್ಪುವಂತಹ ಭಾಷೆಯನ್ನು ಸೃಷ್ಟಿಸಬೇಕು. ಗಾಂಧಿಗೆ ಅದು ಸಾಧ್ಯವಾಗಿತ್ತು’ ಎಂದು ಲೇಖಕಿ ವೈದೇಹಿ ಹೇಳಿದರು.

ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿರೋಧ ಮಾಡುವವರೆಲ್ಲ ಇರಲೇಬಾರದು ಎಂಬ ಭಾವನೆ ಬಲವಾಗಿ ಬೇರೂರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬರಹಗಾರರು ಸುಲಭವಾಗಿ ಏನನ್ನೂ ಬರೆಯಲು ಆಗದ ಸ್ಥಿತಿ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಸಮಾರಂಭದಲ್ಲಿ ‘ಪ್ರಜಾವಾಣಿ’ಯ ಸಹ ಸಂಪಾದಕ ಎಂ. ನಾಗರಾಜ್, ಮಂಗಳೂರು ಬ್ಯೂರೋ ಮುಖ್ಯಸ್ಥ ಎಂ.ಜಿ. ಬಾಲಕೃಷ್ಣ, ಮುಖ್ಯ ಉಪ ಸಂಪಾದಕಿ ಶೈಲಜಾ ಹೂಗಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.