ADVERTISEMENT

ಐಎಫ್‌ಎಸ್‌ ಫಲಿತಾಂಶ ಪ್ರಕಟ ರಾಜ್ಯದ ಆರು ಮಂದಿ ಆಯ್ಕೆ

ಡಾ. ಕೆ.ಎನ್‌. ಬಸವರಾಜ ಅವರಿಗೆ 34ನೇ ರ್ಯಾಂಕ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಐಎಫ್‌ಎಸ್‌ ಫಲಿತಾಂಶ ಪ್ರಕಟ ರಾಜ್ಯದ ಆರು ಮಂದಿ ಆಯ್ಕೆ
ಐಎಫ್‌ಎಸ್‌ ಫಲಿತಾಂಶ ಪ್ರಕಟ ರಾಜ್ಯದ ಆರು ಮಂದಿ ಆಯ್ಕೆ   
ಬೆಂಗಳೂರು: ಭಾರತೀಯ ಅರಣ್ಯ ಸೇವೆಗೆ (ಐಎಫ್‌ಎಸ್‌) ಸಂಬಂಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)  ನಡೆಸಿದ್ದ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು, ರಾಜ್ಯದ ಆರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 110 ಮಂದಿ ಆಯ್ಕೆಯಾಗಿದ್ದಾರೆ.
 
ಸಾಮಾನ್ಯ ಪ್ರವರ್ಗದ 48, ಇತರ ಹಿಂದುಳಿದ ವರ್ಗಗಳ 37, ಎಸ್ಸಿ 17, ಎಸ್ಟಿ 8 ಅಭ್ಯರ್ಥಿಗಳು ಐಎಫ್‌ಎಸ್‌ಗೆ ಆಯ್ಕೆಆಗಿದ್ದಾರೆ.
 
ಕರ್ನಾಟಕದ ಡಾ. ಕೆ.ಎನ್‌. ಬಸವರಾಜ ಅವರಿಗೆ 34ನೇ ರ್ಯಾಂಕ್ ದೊರೆತಿದೆ. ಮೂಲತಃ ಬಳ್ಳಾರಿಯ ಮೋರಿಗೇರಿಯವರಾದ ಬಸವರಾಜ ಅವರು ಪ್ರಸ್ತುತ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವೈಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
 
ಬೆಂಗಳೂರಿನ ಕೆ.ಆರ್‌. ಅರ್ಜುನ್‌ (45ನೇ ರ್ಯಾಂಕ್), ಬೀದರ್‌ನ ರಾಹುಲ್‌ ಶಿಂದೆ (57), ಮಂಡ್ಯದ ಮಳವಳ್ಳಿಯ ಎಚ್‌. ದಿಲಿಪ್‌ ಕುಮಾರ್‌ (65), ಬೆಂಗಳೂರಿನ ಇ. ರಂಗಸ್ವಾಮಿ (82), ಮಂಡ್ಯದ ಎಚ್‌.ಎಸ್‌.ಪದ್ಮನಾಭ (109) ಆಯ್ಕೆಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.