ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಫ್ಲೆಕ್ಸ್' ವಿವಾದ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 11:37 IST
Last Updated 3 ಡಿಸೆಂಬರ್ 2016, 11:37 IST
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಫ್ಲೆಕ್ಸ್' ವಿವಾದ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಫ್ಲೆಕ್ಸ್' ವಿವಾದ   

ರಾಯಚೂರು: ಇಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಕಾಣಿಸಿಕೊಂಡಿರುವ ಫ್ಲೆಕ್ಸ್' ಬಗ್ಗೆ ಸಾಮಾಜಿಕ ತಾಣಗಳಲ್ಲಿ  ಭಾರೀ ಚರ್ಚೆಯಾಗುತ್ತಿದೆ.

ಸಾಹಿತ್ಯ ಸಮ್ಮೇಳನದ ಆವರಣದಲ್ಲಿದ್ದ ಫ್ಲೆಕ್ಸ್ ವೊಂದರಲ್ಲಿ ಸರ್ವಜ್ಞನ ವಚನವನ್ನು ತಿರುಚಿ ಬರೆದದ್ದು ವಿವಾದಕ್ಕೆ ನಾಂದಿ ಹಾಡಿದೆ.

ಫ್ಲೆಕ್ಸ್ ನಲ್ಲಿ ಏನಿದೆ?
ವಾಸಕ್ಕೆ ಆಶ್ರಯ ಮನೆ ಇರಲು
ರೂಪಾಯಿಗೊಂದು ಕೆ.ಜಿ ಅಕ್ಕಿ ಸಿಗುತಿರಲು
ರಾತ್ರಿ ನಶೆಗೆ ಅಗ್ಗದ ಮಧ್ಯವಿರಲು
ಕೂಲಿ ಕೆಲಸಕ್ಕೆ ಬೆಂಕಿ ಹಂಚ್ಚೆಂದ ಸರ್ವಜ್ಞ
-ಸರ್ವಜ್ಞ

ADVERTISEMENT

ಈ ರೀತಿ ಸರ್ವಜ್ಞನ ವಚನವನ್ನು ತಿರುಚಿ ಬರೆಯಲಾಗಿದೆ.

ಎಲ್ಲಿತ್ತು ಫ್ಲೆಕ್ಸ್?
ಸಮ್ಮೇಳನದ ಪ್ರಧಾನ ವೇದಿಕೆಯ ಹಿಂಭಾಗದಲ್ಲಿ ಸಮಾನಾಂತರ ವೇದಿಕೆಗೆ ಹೋಗುವ ರಸ್ತೆಯಲ್ಲಿ ಬರುವ ವೃತ್ತದ ಎಡಭಾಗದ ತಿರುವಿನಲ್ಲಿರುವ ಬೇಲಿಯ ಬಳಿ ಈ ಫ್ಲೆಕ್ಸ್ ಕಂಡು ಬಂದಿತ್ತು. ಶನಿವಾರ ಬೆಳಗ್ಗೆ 8.30ರ ವರೆಗೆ ಆ ಫ್ಲೆಕ್ಸ್ ಅಲ್ಲಿಯೇ ಇತ್ತು. ಫ್ಲೆಕ್ಸ್ ಬರಹದ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಅದನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.

ಸಾಮಾಜಿಕ ತಾಣಗಳಲ್ಲಿ ಚರ್ಚೆ

</p><p>ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಸಿಕೊಂಡ ಈ ಫ್ಲೆಕ್ಸ್ ಬರಹದ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ತಿರುಚಲ್ಪಟ್ಟ ವಚನಗಳನ್ನೇ ಸರ್ವಜ್ಞನ ವಚನ ಎಂದು ಫ್ಲೆಕ್ಸ್ ನಲ್ಲಿ ಪ್ರಕಟಿಸಿದ್ದರೆ ಬಗ್ಗೆ ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದರೆ, ಇನ್ನು ಕೆಲವರು ಅದರಲ್ಲಿರುವ ಅಕ್ಷರ ತಪ್ಪುಗಳ ಬಗ್ಗೆ ಬೊಟ್ಟು ಮಾಡಿದ್ದಾರೆ.</p><p>ಫ್ಲೆಕ್ಸ್ ಫೋಟೋ ಶೇರ್ ಮಾಡಿರುವ ಕೆಲವು ನೆಟಿಜನ್‍ಗಳು ಆಯೋಜಕರ ವಿರುದ್ಧವೂ ಕಿಡಿ ಕಾರಿದ್ದಾರೆ.<br/>&#13; *<br/>&#13; <strong>ಕಿಡಿಗೇಡಿಗಳ ಕೃತ್ಯ</strong><br/>&#13; ‘ವಿವಾದಕ್ಕೆ ಕಾರಣವಾದ ಫ್ಲೆಕ್ಸ್‌ ಅನ್ನು ಯಾರೋ ಕಿಡಿಗೇಡಿಗಳು ಹಾಕಿದ್ದಾರೆ. ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಮತ್ತು ಎಸ್ಪಿ ಜತೆಗೆ ಮಾತನಾಡಿದ್ದೇನೆ. ಫ್ಲೆಕ್ಸ್‌ ಹಾಕಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ಮನವಿ ಮಾಡಿದ್ದೇನೆ’<br/>&#13; <strong>–ಮನು ಬಳಿಗಾರ್‌,</strong><br/>&#13; ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ</p><p> </p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.